ಪುತ್ತೂರು: ಬಿಜಾಪುರದಲ್ಲಿ ಹೊಟೇಲ್ ಉದ್ಯಮಿಯಾಗಿದ್ದ ಪುತ್ತೂರು ಹೆಬ್ಬಾರುಬೈಲು ನಿವಾಸಿ ಚಂದ್ರಶೇಖರ್ ಹೆಚ್.ಎನ್ ಅವರ ಉತ್ತರ ಕ್ರೀಯೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮ ಜು. 30ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಕ್ಷೇತ್ರದಲ್ಲಿ ನಡೆಯಿತು.
ಹೆಬ್ಬಾರಬೈಲು ದಿ.ಹೆಚ್.ನಾರಾಯಣ ಅವರ ಪುತ್ರ ಚಂದ್ರಶೇಖರ್ ಹೆಚ್.ಎನ್ ಅವರ ಭಾವ ಚಿತ್ರದ ಎದುರು ಪುಷ್ಪಾರ್ಚನೆ ಮಾಡಿ ನುಡಿಮನ ಸಲಿಸಲಾಯಿತು. ಈ ಸಂದರ್ಭದಲ್ಲಿ ಮಾಜ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ಚಂದ್ರಶೇಖರ್ ಅವರ ಸಹೋದರರಾದ ಮಾಜಿ ಪುರಸಭೆ ಉಪಾಧ್ಯಕ್ಷ ಹೆಚ್.ಉದಯ, ತಾರನಾಥ ಮತ್ತು ಪತ್ನಿ ರೂಪಾ, ಪುತ್ರ ಅನೀಶ್, ಪುತ್ರಿ ಅನನ್ಯ ಸೇರಿದಂತೆ ಬಂದು ಬಳಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.