ಪೂರ್ಲಪ್ಪಾಡಿ ಶ್ರೀವರ ಯುವಕ ಮಂಡಲ,ವಿಟ್ಲಪಡ್ನೂರು ಗ್ರಾ.ಪಂ.ಸಹಯೋಗದಲ್ಲಿ ರಸಪ್ರಶ್ನೆ ಕಾರ್ಯಕ್ರಮ

0

ವಿಟ್ಲ: ಶ್ರೀವರ ಯುವಕ ಮಂಡಲ (ರಿ.)ಪೂರ್ಲಪ್ಪಾಡಿ ಹಾಗೂ ಗ್ರಾಮ ಪಂಚಾಯತ್ ವಿಟ್ಲಪಡ್ನೂರು ಇದರ ಸಹಯೋಗದೊಂದಿಗೆ ಮೂರು ಗ್ರಾಮಗಳಿಗೆ ಒಳಪಟ್ಟ ಆಯ್ದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ಪೂರ್ಲಪ್ಪಾಡಿ ಶ್ರೀವರ ವೇದಿಕೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಯುವಕ ಮಂಡಲದ ಗೌರವ ಸಲಹೆಗಾರರು, ಹಿರಿಯ ವಕೀಲರು, ನೋಟರಿ ಆಗಿರುವ ರಾಮಣ್ಣ ಗೌಡ ದೇವರಮನೆ ಉದ್ಘಾಟಿಸಿದರು. ರಸಪ್ರಶ್ನೆ ಕಾರ್ಯಕ್ರಮದಲ್ಲಿ ಆಯ್ತ ಸರಕಾರಿ ಶಾಲೆಗಳಾದ ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ, ಕಡಂಬು, ಕೊಡಪದವು ಹಿ.ಪ್ರಾ ಶಾಲೆ, ಕೊಳ್ನಾಡು ಗ್ರಾಮದ ಮಂಕುಡೆ ಶಾಲೆ ಹಾಗೂ ವಿಟ್ಲಕಸಬ ಗ್ರಾಮದ ಅನಿಲಕಟ್ಟೆ, ಕಾನತ್ತಡ್ಕ, ಚಂದಳಿಕೆ ಹಾಗೂ ಒಕ್ಕೆತ್ತೂರು ಶಾಲೆಗಳು ಭಾಗವಹಿಸಿದ್ದವು, ರಸಪ್ರಶ್ನೆ ಸ್ಪರ್ಧೆಯು 5 ಹಂತಗಳಲ್ಲಿ ನಡೆಸಲಾಗಿತ್ತು ಇದರಲ್ಲಿ ಪ್ರಥಮ ಸ್ಥಾನವನ್ನು ದ.ಕ. ಜಿ. ಪಂ. ಹಿ. ಪ್ರಾ. ಶಾಲೆ ಒಕ್ಕೆತ್ತೂರು ಪಡೆಯಿತು. ದ್ವಿತೀಯ ಸ್ಥಾನವನ್ನು ಹಿ. ಪ್ರಾ. ಶಾಲೆ ಕಾನತ್ತಡ್ಕ ಮತ್ತು ತೃತೀಯ ಸ್ಥಾನವನ್ನು ದ. ಕ. ಜಿ. ಪಂ. ಉ. ಶಾಲೆ ಕೋಡಪದವು ಪಡೆಯಿತು.
ಯುವಕ ಮಂಡಲದ ಗೌರವಾಧ್ಯಕ್ಷರಾದ ಈಶ್ವರ ಭಟ್ ಬದನಾಜೆ ಕಾರ್ಯಕ್ರಮ ನಿರೂಪಿಸಿದರು.

ಬಹುಮಾನ ವಿತರಣಾ ಕಾರ್ಯಕ್ರಮವು ಯುವಕ ಮಂಡಲದ ಅಧ್ಯಕ್ಷರಾದ ಕಿರಣ್ ಚಂದ್ರ ಆಳ್ವ ರವರ ಉಪಸ್ಥಿತಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವಿಟ್ಲ ಪಡ್ನೂರು‌ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತ ಪಿ, ನವೀನ್ ತಂತ್ರಿ ಕುಂಟುಕುಡೆಲು, ಹವ್ಯಾಸಿ ಯಕ್ಷಗಾನ ಅರ್ಥದಾರಿಗಳಾದ ಜಗದೀಶ್ ಪನಡ್ಕ ಪುಣಚ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೈಲ ಡೊಣುರ, ಪಂಚಾಯತ್ ಕಾರ್ಯದರ್ಶಿ ಅಬ್ದುಲ್ ಕರಿಂ, ಶಾಲಾ ಶಿಕ್ಷಕರಾದ ಬಿ ವಿಶ್ವನಾಥ ಗೌಡ ಕುಳಾಲು, ಶ್ವೇತ ಕುಮಾರಿ ಜಿ, ವಾಣಿಶ್ರೀ ಸಿ, ಯಶಸ್ವಿನಿ, ಗೀತಾ ಕೆ, ಪವಿತ್ರ, ರಕ್ಷಿತಾ, ಐತ್ತಪ್ಪ ನಾಯ್ಕ, ಅಂಗನವಾಡಿ ಕಾರ್ಯಕರ್ತೆ ವಾಣಿ ಮೊದಲಾದವರು ಉಪಸ್ಥಿತರಿದ್ದರು. ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮದಲ್ಲಿ ಶ್ವೇತಾ ಚೇತನ್, ರಾಕೇಶ್ ಕಾಮಟ, ಅಶ್ವಿನಿ ಜಯಂತ್ ಸಹಕರಿಸಿದರು.


ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳನ್ನು ಪ್ರೋತ್ಸಾಹಿಸುವ ಹಾಗೂ ಮಕ್ಕಳಿಗೆ ಔಷಧಿಯ ಸಸ್ಯ ಮತ್ತು ಹಣ್ಣುಗಳನ್ನು ಗುರುತಿಸುವ ಸ್ಪರ್ಧೆಯನ್ನು ಏರ್ಪಡಿಸಿ ಜೋಡಿಸಲಾಗಿತ್ತು, ಇದರ ಬಹುಮಾನವನ್ನು ಜಗದೀಶ್ ಪನಡ್ಕರವರ ವೈಯಕ್ತಿಕ ನೆಲೆಯಲ್ಲಿ ನೀಡಿದರು. ಅದಲ್ಲದೆ ಯುವಕ ಮಂಡಲದ ಸದಸ್ಯರಾದ ಪ್ರಜೇಶ್ ಕೆ. ರವರ ನೇತೃತ್ವದಲ್ಲಿ ಭಾರತ್ ಪ್ರೆಶ್ ಚಿಕನ್, ಯೂನಿಟ್ ಆಫ್ ಭಾರತ್ ಆಗ್ರೋವೆಟ್ ಇಂಡಸ್ಟ್ರೀಸ್ ರವರ ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ನೀಡಲಾಯಿತು.

LEAVE A REPLY

Please enter your comment!
Please enter your name here