ನಾಳ ದೇವಸ್ಥಾನದಲ್ಲಿ ಕದಿರು (ತೆನೆ)ಪೂಜೆ

0


ನಾಳ : ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆ.31 ರಂದು ಕದಿರು (ತೆನೆ) ಪೂಜೆ ಹಾಗೂ ವಿತರಣೆ  ಮತ್ತು  ಪೂರ್ವಾಹ್ನ ಗಣ ಹೋಮ ಹಾಗೂ ಮಹಾ ಪೂಜೆ ನಡೆಯಿತು.

ನಾಳ ದೇವಸ್ಥಾನದ ಮಹಾ ದ್ವಾರದಿಂದ ತೆನೆಯನ್ನು ಮಂಗಳ ವಾದ್ಯಗಳೊಂದಿಗೆ ವಸಂತ ಕಟ್ಟೆಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ. ರಾಘವೇಂದ್ರ ಅಸ್ರಣ್ಣ ಪೌರಾತ್ಯ ದಲ್ಲಿ ವಿಧಿವತ್ತಾಗಿ ವಿಶೇಷ ಪೂಜೆ ನಡೆಯಿತು.

ನಂತರ ದೇವರ ಸನ್ನಿಧಿಯಲ್ಲಿ ಭಕ್ತರಿಗೆ ಕದಿರು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ, ಸದಸ್ಯರು, ಅಭಿವೃದ್ಧಿ ಸಮಿತಿ ಅಧ್ಯಕ್ಷ, ಸದಸ್ಯರು, ಮಹಿಳಾ ಮಾತೃ ಮಂಡಳಿ, ಭಜನಾ ಮಂಡಳಿ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here