ಪ್ರಧಾನಿಯವರ ಸಮಾವೇಶಕ್ಕೆ ತೆರಳಿದ ಕಳಿಯ ಗ್ರಾಮದ 350ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು

0

ಕಳಿಯ: ಇಂದು ದೇಶದ ಪ್ರಧಾನಿ ಮಂಗಳೂರಿಗೆ ಆಗಮಿಸುತ್ತಿದ್ದು ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಿಂದ 7 ಬಸ್ ಗಳನ್ನು ಆಯೋಜಿಸಲಾಗಿದ್ದು, ಸುಮಾರು 350 ಕ್ಕೂ ಹೆಚ್ಚು ಕಾರ್ಯಕರ್ತರು  ಮಂಗಳೂರಿನಲ್ಲಿ ನಡೆಯುವ ಸಮಾವೇಶಕ್ಕೆ ಭಾಗಿಯಾಗಿದ್ದಾರೆ.

ಕಾರ್ಯಕರ್ತರಿಗೆ ಕಳಿಯ ಗ್ರಾಮದ 1ನೇ ವಿಭಾಗದ ಕಾರ್ಯಕರ್ತರಿಗೆ  ಸ್ಥಳೀಯರಾದ  ಸತೀಶ್ ಕುಮಾರ್ ಆರ್.ಎನ್. ಮತ್ತು 3ನೇ ವಿಭಾಗದ ಕಾರ್ಯಕರ್ತರಿಗೆ ಕಳಿಯ ಗ್ರಾ.ಪಂ ಸದಸ್ಯ ಯಶೋಧರ್ ಶೆಟ್ಟಿ ಮಾಣಿಕ್ಯ   ಕೇಸರಿ ಶಾಲು ನೀಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕಳಿಯ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಕ್ಷದ ಪ್ರಮುಖ ಕಾರ್ಯಕರ್ತರು, ಸ್ರ್ತೀ ಶಕ್ತಿ ಸ್ವಸಹಾಯ ಸಂಗದ ಸದಸ್ಯರು, ಆಶಾ ಕಾರ್ಯಕರ್ತರು, ಪಕ್ಷದ ಕಾರ್ಯಕರ್ತರು ಮತ್ತಿತರರು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here