ಗೇರುಕಟ್ಟೆ : 50ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ 3 ನೇ ದಿನವಾದ ಇಂದು ಯಕ್ಷ – ಗಾನ – ವೈಭವ ಸೆ.2 ರಂದು ಗೇರುಕಟ್ಟೆ ಕಳಿಯ ಕೃಷಿ ಪತ್ತಿನ ಸಹಕಾರಿ ಸಭಾಭವನದಲ್ಲಿ ವಿಜೃಂಭಣೆಯಿಂದ ಜರುಗಿತು.
ಭಾಗವತರಾಗಿ ಸತ್ಯ ನಾರಾಯಣ ಪುಣಿಚಿತ್ತಾಯ ಪೆರ್ಲ,ರವಿಚಂದ್ರ ಕನ್ನಡಿಕಟ್ಟೆ, ಗಣೇಶ್ ಹೆಬ್ರಿ ಹಾಗೂ ಕಾವ್ಯಶ್ರೀ ಅಜೇರು,ಚೆಂಡೆ ,ಮದ್ದಳೆ : ಚೈತನ್ಯ ಕೃಷ್ಣ ಪದ್ಯಾಣ,ರೋಹಿತ್ ಉಚ್ಚಿಲ, ಚಕ್ರತಾಳ : ರಾಜೇಂದ್ರ ಕೃಷ್ಣ ಹಾಗೂ ನಿರೂಪಣೆ : ಡಿ.ಮಾಧವ ಬಂಗೇರ ಕೊಳತ ಮಜಲು ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮ ಪದಾಧಿಕಾರಿಗಳು, ಯಕ್ಷಗಾನ ಅಭಿಮಾನಿಗಳು ಮತ್ತು ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.