ಬೆಳ್ತಂಗಡಿ, ಸೆ.7: ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (ಎಸ್ ಡಿಟಿಯು) ಬೆಳ್ತಂಗಡಿ ಕ್ಷೇತ್ರ ಸಮಿತಿಯನ್ನು ಪುನರಚನೆ ನಡೆಸಲಾಯಿತು
ಅಧ್ಯಕ್ಷರಾಗಿ ಸ್ವಾಲಿಹ್, ಉಪಾಧ್ಯಕ್ಷರಾಗಿ ಇಕ್ಬಾಲ್ ಸಾಲ್ಮರ, ಕಾರ್ಯದರ್ಶಿಯಾಗಿ ರಿಯಾಝ್ ಪನಕಾಜೆ, ಜೊತೆ ಕಾರ್ಯದರ್ಶಿಯಾಗಿ ಹಮೀದ್ ಸಾಲ್ಮರ ಕೋಶಾಧಿಕಾರಿಯಾಗಿ ಆಶ್ರಫ್ ಕಲ್ಲೇರಿ, ಸದಸ್ಯರಾಗಿ ಆರಿಫ್ ಉಜಿರೆ, ಇಕ್ಬಾಲ್ ಪನಕಾಜೆ, ರಝಾಕ್ ಮದ್ದಡ್ಕ, ನಿಸಾರ್ ಕಲ್ಲೇರಿ ರವರನ್ನು ಆಯ್ಕೆ ಮಾಡಲಾಯಿತು
ಕಾರ್ಮಿಕರು ಯಾಕೆ ಸಂಘಟಿತರಾಗಬೇಕು ಮತ್ತು ಅವರ ಸಮಸ್ಯೆಗಳೇನು ಎಂಬ ವಿಷಯದಲ್ಲಿ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ರಾಜ್ಯ ಕೋಶಾಧಿಕಾರಿ ಕಾದರ್ ಫರಂಗಿಪೇಟೆ ವಿವರಿಸಿದರು ಜಿಲ್ಲಾಧ್ಯಕ್ಷ ಝಾಕೀರ್ ಉಳ್ಳಾಲ್ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿ ಸಮಿತಿಯನ್ನು ಪುನಾರಚನೆಗೈದರು ಜಿಲ್ಲಾ ಕಾರ್ಯದರ್ಶಿ ಶಮೀಮ್ ಯೂಸುಫ್, ನಿಸಾರ್ ಕುದ್ರಡ್ಕ,ನಿಝಾಮ್ ಬೆಳ್ತಂಗಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.