ತಾಲೂಕು ಮರಾಟಿ ಸಮಾಜ ಸೇವಾ ಸಂಘ ಬೆಳ್ತಂಗಡಿ ಇದರ ವತಿಯಿಂದ ಆರೋಗ್ಯ ನಿಧಿ ಹಸ್ತಾಂತರ

0

ಬೆಳ್ತಂಗಡಿ:  ತಾಲೂಕು ಮರಾಟಿ ಸಮಾಜ ಸೇವಾ ಸಂಘ ಬೆಳ್ತಂಗಡಿ ಇದರ ವತಿಯಿಂದ ಸಂಘದ ಸದಸ್ಯರಾದ ಸುಂದರ ನಾಯ್ಕ ರವರ ಪತ್ನಿ ಅನಾರೋಗ್ಯ ಪೀಡಿತ ಕಣಿಯೂರು ರೇವತಿಯವರಿಗೆ ದಾನಿಗಳಿಂದ ಸಂಗ್ರಹಿಸಿದ “ಮರಾಟಿ ಆರೋಗ್ಯ ನಿಧಿ “ಮೊತ್ತ ರೂ 34000/= ವನ್ನು   ತಾಲೂಕು ಸಂಘದ ಪದಾಧಿಕಾರಿಗಳು ರೇವತಿಯವರ ನಿವಾಸ ಪೈರೋಟ್ಟುಗೆ ತೆರಳಿ ಆರೋಗ್ಯ ನಿಧಿಯ ಚೆಕ್ ನ್ನು ಹಸ್ತಾಂತರಿಸಿ ಆರೋಗ್ಯ ವಿಚಾರಿಸಿ ಧೈರ್ಯದ ಮಾತುಗಳನ್ನು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಸಂಘದ ಅಧ್ಯಕ್ಷ ಉಮೇಶ್ ಕೆ, ಗೌರವ ಸಲಹೆಗಾರರಾದ ಸಂತೋಷ್ ಕುಮಾರ್,ಉಪಾಧ್ಯಕ್ಷರಾದ ಸತೀಶ್ ಹೆಚ್ ಎಲ್, ಕಾರ್ಯದರ್ಶಿ  ಪ್ರಸಾದ್, ಕೋಶಾಧಿಕಾರಿ ಪ್ರಜ್ವಲ್, ಪತ್ರಿಕಾಮಾಧ್ಯಮ ಜೊತೆ ಕಾರ್ಯದರ್ಶಿ ಶರತ್ ಕಣಿಯೂರು,ಕಣಿಯೂರು ಗ್ರಾಮ ಸಮಿತಿಯ ಕ್ರೀಡಾ ಕಾರ್ಯದರ್ಶಿ ಯಾದವ,ಸದಸ್ಯರುಗಳಾದ ಶರತ್ ಗೇರುಕಟ್ಟೆ, ಶಿವರಾಮ ಕೊಳಚ್ಚಾವು, ಕಾರ್ತಿಕ್ ಕಣಿಯೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here