ಕೊಕ್ಕಡ: ಬಯಲು ಆಲಯವೆಂದೇ ಪ್ರಸಿದ್ಧಿ ಪಡೆದ ಸೌತಡ್ಕ ದೇವಸ್ಥಾನಕ್ಕೆ ಕೆನರಾ ಬ್ಯಾಂಕ್ ವತಿಯಿಂದ ಸೆಲ್ಕೋ ಕಂಪೆನಿಯ ರೂ 1 ಲಕ್ಷ 25 ಸಾವಿರ ಮೌಲ್ಯದ ಸೋಲಾರ್ ಬಿಸಿ ನೀರ ಸಿಸ್ಟಮ್ ನ್ನು ಸೆ.13 ರಂದು ಕೊಡುಗೆಯಾಗಿ ನೀಡಲಾಯಿತು.
ಕೆನರಾ ಬ್ಯಾಂಕ್ ಪುತ್ತೂರು ಡಿವಿಷನ್ ಎ ಜಿ ಎಂ ನರೇಂದ್ರ ರೆಡ್ಡಿ , ಕೊಕ್ಕಡ ಶಾಖಾ ವ್ಯವಸ್ಥಾಪಕ ಅಂಕಿತ್ ಸಿಂಗ್ , ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ, ಸದಸ್ಯರಾದ ಪುರಂದರ ಕಡೀರ, ಪ್ರಶಾಂತ್ ಪೂವಾಜೆ, ಯಶೋಧ ಉಮೇಶ್ ಶಬರಾಡಿ, ನವೀನ ಕಜೆ, ವಿಠ್ಠಲ ಕುರ್ಲೆ, ಕಾರ್ಯನಿರ್ವಾಹಣಾಧಿಕಾರಿ ದಯಾನಂದ ಹೆಗ್ಡೆ, ಅರ್ಚಕರಾದ ಗುರುರಾಜ್ ಉಪ್ಪಾರ್ಣ, ಹಿರಿಯರಾದ ಕುಶಾಲಪ್ಪ ಗೌಡ ಪೂವಾಜೆ ಉಪಸ್ಥಿತರಿದ್ದರು.