ನಿಡ್ಲೆ: ಕೇರೆ ಹಾವನ್ನು ನುಂಗಿದ ಕಾಳಿಂಗ ಸರ್ಪ: ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕ ಸ್ನೇಕ್ ಪ್ರಕಾಶ್

0

 

ನಿಡ್ಲೆ: ನಿಡ್ಡಾಜೆಯ ಮನೆ ನಿವಾಸಿ ಆದರ್ಶ್ ರಾವ್ ಎಂಬವರ ಮನೆಯ ಕೊಟ್ಟಿಗೆ ಬಳಿ ಕಾಳಿಂಗ ಸರ್ಪವೊಂದು ಕೇರೆ ಹಾವನ್ನು ನುಂಗಿದ ಘಟನೆ ಸೆ.13ರಂದು ನಡೆದಿದೆ.

ಸಂಜೆ  ಕೇರೆ ಹಾವನ್ನು ಬೆನ್ನಟಿಕೊಂಡು ಮನೆಗೆ ಬಂದ ಕಾಳಿಂಗ ಸರ್ಪ ಮನೆಯ ಕೊಟ್ಟಿಗೆ ಬಳಿ ಬಂದು ಕೇರೆ ಹಾವನ್ನು ನುಂಗಿ ಎಲ್ಲೂ ಕದಲದೇ ಅಲ್ಲೇ ಇದ್ದುದನ್ನು ಗಮನಿಸಿದ ಮನೆಯವರಿಗೆ ಆತಂಕ ಮೂಡಿದೆ. ತಕ್ಷಣ ಮಾಹಿತಿ ತಿಳಿದ  ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕ ಸ್ನೇಕ್ ಪ್ರಕಾಶ್ ಸ್ಥಳಕ್ಕೆ ಆಗಮಿಸಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿರುತ್ತಾರೆ.

 

LEAVE A REPLY

Please enter your comment!
Please enter your name here