ಬೆಳ್ತಂಗಡಿ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ.ಎಸ್.ಸಿ.ಎ) ಇದರ ಆಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆಯುವ ಅಂಡರ್-19 ಹಾಗೂ ಅಂಡರ್-25 ಅಂತರ್ ವಲಯ ಕ್ರಿಕೆಟ್ ಪಂದ್ಯಾಟಕ್ಕೆ ಮಂಗಳೂರು ವಲಯ ತಂಡಗಳನ್ನು ಪ್ರತಿನಿಧಿಸಲು ಸೇಕ್ರೆಡ್ ಹಾರ್ಟ್ ಮಡಂತ್ಯಾರು ಕಾಲೇಜಿನ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.
ಸೆಪ್ಟೆಂಬರ್ 12 ರಿಂದ 25 ವರೆಗೆ ನಡೆಯುತ್ತಿರುವ ಪಂದ್ಯಾಟದ ಅಂಡರ್-19 ಮಂಗಳೂರು ವಲಯ ತಂಡಕ್ಕೆ ಪ್ರಥಮ ವಾಣಿಜ್ಯ ಪದವಿ ವಿದ್ಯಾರ್ಥಿಗಳಾದ ಋಷಿ ಬಿ.ಶೆಟ್ಟಿ (ಕೆ. ಬಾಲಕೃಷ್ಣ ಶೆಟ್ಟಿ ಮತ್ತು ಮೃದುಲ ಬಿ.ಶೆಟ್ಟಿ ದಂಪತಿಗಳ ಪುತ್ರ) ಹಾಗೂ ಸ್ವಸ್ತಿಕ್ ಸುಂದರ್ ಮೂಲ್ಯ (ಸುಂದರ ರಾಮ ಮೂಲ್ಯ ಮತ್ತು ಸುಜಾತ ಸುಂದರ ಮೂಲ್ಯ ದಂಪತಿಗಳ ಪುತ್ರ)ಇವರು ಆಯ್ಕೆಯಾಗಿರುತ್ತಾರೆ.
ಸಪ್ಟೆಂಬರ್ 15 ರಿಂದ 28 ರವರೆಗೆ ನಡೆಯಲಿರುವ ಪಂದ್ಯಾಟಕ್ಕೆ ಅಂಡರ್-25 ಮಂಗಳೂರು ವಲಯ ತಂಡದ ಕಪ್ತಾನನಾಗಿ ದ್ವಿತೀಯ ಕಲಾ ವಿಭಾಗದ ಸತ್ಯಸ್ವರೂಪ್ ಇವರು ಆಯ್ಕೆಯಾಗಿರುತ್ತಾರೆ. ಇವರು ಎನ್.ವಿಜಯ್ ಕುಮಾರ್ ಹಾಗೂ ಲಕ್ಷ್ಮಿ ದಂಪತಿಗಳ ಪುತ್ರ.