ಪ್ರಗತಿಪರ ಕೃಷಿಕ ಏಣೀರು ಕೃಷ್ಣಪ್ಪ ಕರ್ಕೇರ ನಿಧನ

0

ಕನ್ಯಾಡಿ: ಕನ್ಯಾಡಿ ಗ್ರಾಮದ ಏಣೀರು ಗುರಿಪಳ್ಳ ಕೃಷ್ಣಪ್ಪ ಕರ್ಕೇರ ಅಲ್ಪ ಕಾಲದ ಅಸೌಖ್ಯದಿಂದ ಸೆ. 16ರಂದು ಸ್ವಗೃಹದಲ್ಲಿ ನಿಧನರಾದರು.

ಇವರು ಓರ್ವ ಪ್ರಗತಿಪರ ಕೃಷಿಕರಾಗಿದ್ದು, ನಿಡಿಗಲ್  ಶ್ರೀ ಲೋಕನಾಥೇಶ್ವರ ದೇವಸ್ಥಾನದ  ವ್ಯವಸ್ಥಾಪನಾ ಸಮಿತಿಯಲ್ಲಿ 20ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಗುರಿಪಳ್ಳ ಶ್ರೀ ರಾಘವೇಂದ್ರ ಭಜನಾ ಮಂಡಳಿ ನಿರ್ಮಾಣದಲ್ಲಿ ಪ್ರಮುಖರಾಗಿದ್ದರು.

ಗುರಿಪಳ್ಳ ಗೆಳೆಯ ಬಳಗದಲ್ಲಿ ಗೌರವ ಸಲಹೆಗಾರರಾಗಿ ಗುರಿಪಳ್ಳ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಭಾರತೀಯ ಕಾಂಗ್ರೆಸ್ ಹಿರಿಯ ಕಾರ್ಯಕರ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮೃತರು ಪತ್ನಿ, ನಾಲ್ಕು ಗಂಡು , ಹೆಣ್ಣು ಮಕ್ಕಳು ಮತ್ತು ಕುಟುಂಬ ವರ್ಗದವರನ್ನು ಅಗಲಿದ್ದಾರೆ.

 

 

LEAVE A REPLY

Please enter your comment!
Please enter your name here