ಬೆಳ್ತಂಗಡಿ: ಪಟ್ಟಣ ಪಂಚಾಯತ್ ಬೆಳ್ತಂಗಡಿ ವತಿಯಿಂದ ಶ್ರಮದಾನ ಮತ್ತು ಸ್ವಚ್ಛತಾ ಜಾಥಾ ಮತ್ತು ಕಸ ವಿಂಗಡಣೆ ಬಗ್ಗೆ ಮಾಹಿತಿ ಕಾರ್ಯಗಾರ
ಸೆ.17 ರಂದು.ಬೆಳ್ತಂಗಡಿ ಮಂಜುನಾಥ ಸ್ವಾಮಿ ಕಲಾಭವನದ ಪಿನಾಕಿ ಸಭಾಭವನದಲ್ಲಿ ನಡೆಯಿತು.
ಸ್ವಚ್ಛತಾ ಜಾಥಾ ಕಾರ್ಯಕ್ರಮ ಕ್ಕೆ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಜನಿ ಕುಡ್ವ ಚಾಲನೆಯನ್ನು ನೀಡಿದರು.
ಪಟ್ಟಣದ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್, ಉಪಾಧ್ಯಕ್ಷರಾದ ಜಯನಂದ ಗೌಡ, ಸ್ದಾಯಿ ಸಮಿತಿ ಅಧ್ಯಕ್ಷ ಲೋಕೇಶ್ , ಸದಸ್ಯರಾದ ಶರತ್ ಕುಮಾರ್, ಅಂಬರೀಶ್, ಜನಾರ್ಧನ ,ನಾಮ ನಿರ್ದೇಶಕರಾದ ಪ್ರಕಾಶ್ ಆಚಾರ್ಯ, ಇಂಜಿನಿಯರ್ ಮಹಾವೀರ ಆರಿಗ ಮತ್ತುಸಿಬ್ಬಂದಿ ವರ್ಗ ಸಂಪನ್ಮೂಲ ವ್ಯಕ್ತಿಯಾಗಿ ಪುನಿತ್ ಮೂಡುಬಿದಿರೆ ಉಪಸ್ಥಿತಿಯಿದ್ದರು.