ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆ

0

ಬೆಳ್ತಂಗಡಿ: ಇಲ್ಲಿಯ ಸಾಂತೊಮ್ ಟವರ್ ನಲ್ಲಿ ಕಾರ್ಯಾಚರಿಸುವ ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸೆ.17ರಂದು ಸಂತೊಮ್ ಟವರ್ ಸಭಾಂಗದಲ್ಲಿ ಜರಗಿತು.

ಸಂಘದ ಅಧ್ಯಕ್ಷ ಎ. ಜೇ ಅನಿಲ್ ಅಧ್ಯಕ್ಷತೆಯನ್ನು ವಹಿಸಿದ್ದರು.  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಜ್ ಪಿ. ಎ. ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು.ಉಪಾಧ್ಯಕ್ಷ ಜಾರ್ಜ್ ಎಂ. ವಿ.,ನಿರ್ದೇಶಕರಾದ ಸೆಬಾಸ್ಟಿಯನ್ ವಿ. ಟಿ., ಅಂದಾನಿ ಕೆ. ಡಿ.,ಬಾಬು ತೋಮಸ್, ಜೈಸ್ಸನ್ ಪಿ. ಎಸ್, ಬಿಜು ಪಿ. ಪಿ,  ಫಿಲೋಮಿನಾ ವಿ., ಸೋಫಿ ಜೋಸೆಫ್, ಸಿಬ್ಬಂದಿ ಗಳಾದ ರೇಷ್ಮಾ ಅಬ್ರಹಾಂ, ಸ್ಟೇನಿ ಎನ್ ಎಸ್, ಆಲ್ವಿನ್ ಆಂಟನಿ, ಅನುಷ ವಿ. ಕೆ., ಪಿಗ್ಮಿ ಸಂಗ್ರಾಹಕ ಸಂತೋಷ್ ಆರ್, ವಿಲ್ಸನ್ ಡಿಸೋಜ, ಪ್ರಮೋದ್ ಕೆ. ನಾಯರ್ ಸಹಕರಿಸಿದರು.

ಸಂಘದ ಸದಸ್ಯರು ಭಾಗವಹಿಸಿ ಸಲಹಾ ಸೂಚನೆ ನೀಡಿದರು. ಸಂಘದಲ್ಲಿ 2021-2 2ಸಾಲಿನಲ್ಲಿ ರೂ.23,56,31, 837ಕೋಟಿ ವ್ಯವಹಾರ ನಡೆಸಿ ರೂ.14,61, 521ಲಕ್ಷ ಲಾಭ ಗಳಿಸಿದೆ ಎಂದರು . ರೂ.30,86, 754ಪಾಲು ಬಂಡವಾಳ ಹೊಂದಿದ್ದು, ರೂ.4ಕೋಟಿ 87ಲಕ್ಷ ಟೇವಣಿ ಸಂಗ್ರಹಿಸಿ, ರೂ. 3.62ಕೋಟಿ ಸಾಲಾ ವಿತರಿಸಿ ಸಂಘವು 13ವರ್ಷದಲ್ಲಿ ಮುನ್ನಡೆಯುತ್ತಿದ್ದು, ಆದುದರಿಂದ ಸದಸ್ಯರಿಗೆ 13% ಡಿವಿಡೆಂಡ್ ನೀಡುವುದಾಗಿ ಘೋಷಿಸಿದರು. ಹಾಗೂ ಇದೆ ಅಕ್ಟೋಬರ್ ತಿಂಗಳಲ್ಲಿ ನೂತನ ಶಾಖೆ ಕಳೆಂಜದಲ್ಲಿ ಸ್ಥಾಪನೆ ಯಾಗಲಿದೆ ಎಂದು ಅಧ್ಯಕ್ಷ ಎ. ಜೇ. ಅನಿಲ್ ಸಭೆಯನ್ನುದ್ದೇಶಿಸಿ ಮಾತನಾಡಿದರು.

LEAVE A REPLY

Please enter your comment!
Please enter your name here