ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ, ನಿವ್ವಳ ರೂ.1.58 ಕೋಟಿ ಲಾಭ

0

ಧರ್ಮಸ್ಥಳ :ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2021-22 ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.17 ರಂದು ಸಂಘದ ಸಾಧನಾ ಕಟ್ಟಡದ “ಆಟಲ್ ಜೀ ಸಭಾಭವನ”ದಲ್ಲಿ ಸಂಘದ ಅಧ್ಯಕ್ಷ ಹರಿದಾಸ್‌ ಗಾಂಭೀರ್ ಬಿ. ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಆರ್ಥಿಕ ವರ್ಷದಲ್ಲಿ ಸಂಘವು 1.58ಕೋಟಿ ಲಾಭ ಗಳಿಸಿದೆ, ಸದಸ್ಯರಿಗೆ ಶೇ.16 ಡಿವಿಡೆಂಟ್ ಘೋಷಣೆ ಮಾಡಿದರು.

ಸಂಘದ ಉಪಾಧ್ಯಕ್ಷ ಶ್ರೀಪತಿ ಹೆಬ್ಬಾರ್ ಎಂ., ನಿರ್ದೇಶಕರುಗಳಾದ ಜಯರಾಮ ಭಂಡಾರಿ ಎಂ., ಚಂದನ್ ಪ್ರಸಾದ್ ಕಾಮತ್, ರಘುಚಂದ್ರ ರಾವ್ ಪಿ., ಪ್ರೀತಮ್ ಡಿ., ಅಜಿತ್ ಕುಮಾರ್ ಜೈನ್,  ಆಶಾ ಸದಾಶಿವ,  ಶಾಂಭವಿ ರೈ, ಸುಮಂಗಳಾ, ಉಮಾನಾಥ, ಶೀನ, ಉಪಸ್ಥಿತರಿದ್ದರು.

ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್. ಸತೀಶ್ ಹೊಳ್ಳ ವರದಿ ವಾಚಿಸಿ ಸಭೆಯನ್ನು ಮುನ್ನಡೆಸಿದರು.ಸಂಘದ ಸಿಬ್ಬಂದಿಗಳು ಸಹಕರಿಸಿದರು. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಹಿರಿಯ ದೈಹಿಕ ಸಂಗ್ರಹಗಾರ ಲೋಕೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ನಿರ್ದೇಶಕ ಎಂ. ಜಯರಾಮ ಭಂಡಾರಿ ವಂದಿಸಿದರು.

LEAVE A REPLY

Please enter your comment!
Please enter your name here