ಕೊಕ್ಕಡ: ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್(ABHA )ಕಾರ್ಯಗಾರದ ಉದ್ಘಾಟನೆ 236 ಬೂತ್ ನ ಹಿರಿಯ ಕಾರ್ಯಕರ್ತ ಶಿವರಾಂ ನಾಯ್ಕ್ ಅವರ ನಿವಾಸದಲ್ಲಿ ನಡೆಯಿತು.
ಈ ಕಾರ್ಯಗಾರದ ಉದ್ಘಾಟನೆಯನ್ನು ಧರ್ಮಸ್ಥಳ ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಮತ್ತು ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷರು ಯೊಗೀಶ್ ಆಲಂಬಿಲ ನೆರವೇರಿಸಿದರು.
ಈ ಸಂಧರ್ಭದಲ್ಲಿ 1ನೇ ಬೂತ್ ಪಂಚಾಯತ್ ಸದಸ್ಯರು ಗಳಾದ ವಿಶ್ವನಾಥ ಕಕ್ಕುದೋಳಿ, ಶರತ್ ನಲಿಕೆ , ವನಜಾಕ್ಷಿ ಹಳ್ಳಿಂಗೇರಿ, ಕೊಕ್ಕಡ ಶಕ್ತಿ ಕೇಂದ್ರ ಪ್ರಮುಖ್ ಜನಾರ್ಧನ, ಎಸ್ ಟಿ ಮೋರ್ಚಾ ತಾಲೂಕು ಕಾರ್ಯದರ್ಶಿ ವಿಠಲ ಕುರ್ಲೆ, 1ನೇ ಬೂತ್ ಅಧ್ಯಕ್ಷರು ಪ್ರಶಾಂತ್ ಪೂವಾಜೆ ,ಕಾರ್ಯದರ್ಶಿ ಅಶ್ವಿನಿ ನಾಯ್ಕ್ ಓಣಿತ್ತಾರು, ಧರ್ಮಸ್ಥಳ ಯೋಜನೆಯ ಮೇಲ್ವಿಚಾರಕಿ ಮಮತಾ ಧರ್ಮಸ್ಥಳ, ಸಿಎಸ್ ಸಿ ಕೇಂದ್ರದ ಕುಮಾರಿ ತೀರ್ಥಲತಾ , ಪಕ್ಷದ ಹಿರಿಯ ಕಾರ್ಯಕರ್ತರಾದ ಶಿವರಾಮ್ ನಾಯ್ಕ್, ಓಣಿತ್ತಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಕುಶಾಲಪ್ಪ ಗೌಡ ಪುಡಿಕೆತ್ತೂರು ಮತ್ತು ಇತರ ಬಿ.ಜೆ.ಪಿ ಕಾರ್ಯಕರ್ತರು ಉಪಸ್ಥಿತರಿದ್ದರು.