ನಾಳ: ತಾಳಮದ್ದಳೆ ಸಪ್ತಾಹದಲ್ಲಿ ಗೇರುಕಟ್ಟೆ ಮೋನಪ್ಪ ಆಚಾರ್ಯರ ಸಂಸ್ಮರಣೆ

0

ನಾಳ: ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜರುಗುತ್ತಿರುವ ತಾಳಮದ್ದಳೆ ಸಪ್ತಾಹದ ಎರಡನೇ ದಿನದಂದು ಕೀರ್ತಿಶೇಷ ಮೋನಪ್ಪ ಆಚಾರ್ಯ ಗೇರುಕಟ್ಟೆ ಇವರ ಸಂಸ್ಮರಣೆ ಕಾರ್ಯಕ್ರಮಕ್ಕೆ ಡಾ. ಅನಂತ ಭಟ್ ಜ್ಯೋತಿ ಕ್ಲಿನಿಕ್ ಗೇರುಕಟ್ಟೆ ಇವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಕಳಿಯ ಗ್ರಾಮ ಪಂಚಾಯತ್ ಸದಸ್ಯ ಯಶೋದರ ಶೆಟ್ಟಿ ಮಾಣಿಕ್ಯ, ಸೌಹಾರ್ದ ಯಕ್ಷಗಾನ ಸಮಿತಿ ರಾಮನಗರ ಅಧ್ಯಕ್ಷರಾದ ಉಮೇಶ ಶೆಣೈ. ಎನ್, ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಜನಾರ್ದನ ಪೂಜಾರಿ .ಎಂ, ಕಲಾವಿದ ಜಬ್ಬಾರ್ ಸಮೋ, ಬೆಳ್ತಂಗಡಿ ಸಹಕಾರಿ ಭಾರತಿ ಅಧ್ಯಕ್ಷರಾದ ರಾಜೇಶ್ ಪೆರ್ಮುಡ, ಕಿಶೋರ್ ಶೆಟ್ಟಿ ಮೂಡಾಯಿರು, ಆನಂದ ಶೆಟ್ಟಿ ಐಸಿರಿ ಪನೆಜಾಲು ಉಪಸ್ಥಿತರಿದ್ದು ಶುಭ ಹಾರೈಸಿದರು.

ಕೀರ್ತಿ ಶೇಷ ಮೋನಪ್ಪ ಆಚಾರ್ಯ ಗೇರುಕಟ್ಟೆ ಸಂಸ್ಮರಣೆಯ ಅಂಗವಾಗಿ ಅವರ ಮೊಮ್ಮಗ ಸನತ್. ಡಿ ಇವರನ್ನು ಗೌರವಿಸಲಾಯಿತು.

ಕರುಣಾಕರ ಶೆಟ್ಟಿ, ಬೆಳ್ತಂಗಡಿ ಸ್ವಾಗತಿಸಿ ದಿವಾಕರ ಆಚಾರ್ಯ ಗೇರುಕಟ್ಟೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಾಳಮದ್ದಳೆ ಸಪ್ತಾಹದ ಸಂಯೋಜಕರಾದ ಕರುಣಾಕರ ಶೆಟ್ಟಿ ಬೆಳ್ತಂಗಡಿ ಗಣ್ಯರನ್ನು ಸ್ವಾಗತಿಸಿದರು. ವಾಣಿ ಹರೀಶ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ದಿವಾಕರ್ ಆಚಾರ್ಯ ಗೇರುಕಟ್ಟೆ ವಂದಿಸಿದರು.

ಬಳಿಕ ಜರುಗಿದ ಅತಿಕಾಯ ಮೋಕ್ಷ ತಾಳಮದ್ದಳೆಯಲ್ಲಿ ಹಿಮ್ಮೇಳದಲ್ಲಿ ಮಹೇಶ್ ಕನ್ಯಾಡಿ, ಚಂದ್ರಶೇಖರ ಗುರುವಾಯನಕೆರೆ, ವೆಂಕಟೇಶ ಮೂರ್ಜೆ ಅರ್ಥದಾರಿಗಳಾಗಿ ಜಬ್ಬಾರ್ ಸಮೊ, ತಾರನಾಥ ವರ್ಕಾಡಿ, ಗುಂಡ್ಯಡ್ಕ ಈಶ್ವರ ಭಟ್, ಗೋಪಾಲ ಶೆಟ್ಟಿ ಕಳೆಂಜ, ದಿವಾಕರ ಗೇರುಕಟ್ಟೆ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here