ನಾಳ ತಾಳಮದ್ದಳೆ ಸಪ್ತಾಹದಲ್ಲಿ ಹಿರಿಯರ ಸಂಸ್ಮರಣೆ

0

 

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜರಗುತ್ತಿರುವ ತಾಳಮದ್ದಳೆ ಸಪ್ತಾಹದ ಐದನೇ ದಿನದ ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯರಾದ ಪ್ರಭಾಕರ್ ರಾವ್ ನಾಳ ದೀಪ ಪ್ರಜ್ವಲಿಸಿ ಶುಭ ಹಾರೈಸಿದರು. ಹಿರಿಯ ಕಲಾವಿದರ ಸಂಸ್ಮರಣೆಯಲ್ಲಿ ಕೀರ್ತಿಶೇಷ ನಾರಾಯಣ ಶೆಟ್ಟಿ ಭಂಡಾರಿಕೋಡಿ ಇವರ ಕಲಾ ಸೇವೆಯ ಬಗ್ಗೆ ದಿವಾಕರ್ ಆಚಾರ್ಯ ಗೇರುಕಟ್ಟೆ ಸ್ಮರಿಸಿದರು.

ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಭಾಷಿಣಿ, ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಗೌಡ, ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರಾಜೇಶ್ ಶೆಟ್ಟಿ ಅಡ್ಡಕೊಡಂಗೆ, ಸುರೇಂದ್ರ ಜೈನ್ ಕಳಿಯ ಬೀಡು, ಸದರ್ನ್ ರೈಲ್ವೆ ಬೆಂಗಳೂರು ನಿವೃತ್ತ ಅಧಿಕಾರಿ ಕೃಷ್ಣ ಕುಂಟಿನಿ, ನಾ.ಚಂಬಲ್ತಿಮಾರ್ ಉಪಸ್ಥಿತರಿದ್ದು ಶುಭ ಹಾರೈಸಿದರು.

ಸಂಸ್ಮರಣೆ ಅಂಗವಾಗಿ ಪುರಂದರ ಶೆಟ್ಟಿ ಭಂಡಾರಿಕೋಡಿ ಇವರನ್ನು ಗೌರವಿಸಲಾಯಿತು.

ಕಣಿಪುರ ಯಕ್ಷಗಾನ ಪತ್ರಿಕೆಯ ಸಂಪಾದಕರಾದ ನಾರಾಯಣ ಚಂಬಲ್ತಿಮಾರ್ ಅವರನ್ನು ಸಪ್ತಾಹದ ಸಂಯೋಜಕರಾದ ಕರುಣಾಕರ ಶೆಟ್ಟಿ ಗೌರವಿಸಿದರು. ಯಕ್ಷಗಾನ, ತಾಳಮದ್ದಲೆಯಂತಹ ಕಾರ್ಯಕ್ರಮಗಳಿಗೆ ಯುವ ಜನಾಂಗವೂ ಪ್ರೇಕ್ಷಕರಾಗಿ ಮತ್ತು ಕಲಾವಿದರಾಗಿ ಭಾಗವಹಿಸುವಂತೆ ಹಿರಿಯರು ಪ್ರೋತ್ಸಾಹ ನೀಡಬೇಕೆಂದು ಅವರು ತಿಳಿಸಿದರು.

ದೇವಳದ ಪ್ರಬಂಧಕ ಗಿರೀಶ್ ಶೆಟ್ಟಿ ನಾಳ ಮತ್ತು ರಾಜೇಶ್ ಪೆರ್ಮುಡ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here