ತಣ್ಣೀರುಪಂಥ: ಕೊಡಂಗೆ ಅಂಗನವಾಡಿ ಕೇಂದ್ರದಲ್ಲಿ ಪೋಷಣೆ ಮಾಸಾಚರಣೆ

0

ತಣ್ಣೀರುಪಂಥ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳ್ತಂಗಡಿ, ಕರಾಯ ವಲಯದ ತಣ್ಣೀರುಪಂಥ ಗ್ರಾಮದ ಕೊಡಂಗೆ ಅಂಗನವಾಡಿ ಕೇಂದ್ರದಲ್ಲಿ ಪೋಷಣೆ ಮಾಸಾಚರಣೆಯನ್ನು ಸೆ.22 ರಂದು ನಡೆಸಲಾಯಿತು.

ತಣ್ಣೀರುಪಂಥ ಆಯುಷ್ ಇಲಾಖೆಯ ಡಾ|| ಕೃಷ್ಣಪ್ರಸಾದ್ ರವರು ಕಾರ್ಯಕ್ರಮ ಉದ್ಘಾಟಿಸಿ, ಆರೋಗ್ಯದ ಬಗ್ಗೆ ಹಾಗೂ ನಾವು ಸೇವಿಸುವ ಾಹಾರಗಳನ್ನು ಹೇಗೆ ಯಾವ ರೀತಿ ಬಳಸಬೇಕು, ಅದರ ಮಹತ್ವದ ಬಗ್ಗೆ ಸವಿವರವಾಗಿ ತಿಳಿಸಿದರು.

ಆರೋಗ್ಯ ಸುರಕ್ಷಾ ಅಧಿಕಾರಿ ಲೋಲಾಕ್ಷಿ, ಪೌಷ್ಠಿಕ ಆಹಾರದ ಮಹತ್ವದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರಾದ ಪ್ರೇಮಾವತಿ, ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಜೋಹರಾಬಿ, ಆಯುಷ್ ಇಲಾಖೆಯ ರಮೇಶ್, ಅಂಗನವಾಡಿ ಮಕ್ಕಳು, ಪೋಷಕರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಉಷಾ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಸಹಾಯಕಿ ಜಯಂತಿ ಕಾರ್ಯಕ್ರಮದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here