ಬೆಳ್ತಂಗಡಿ : ಬೆಳ್ತಂಗಡಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಳು ಶೈಕ್ಷಣಿಕ ಸಾಧನೆಯ ಜೊತೆಗೆ ಹಲವಾರು ರೀತಿಯ ಪ್ರತಿಭೆಯನ್ನು ಬೆಳೆಸಿಕೊಂಡಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷರು ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು. ಅವರು ಸೆ.27 ರಂದು ಕಾಲೇಜಿನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಮಾಡಲಾದ ವರ್ಕಿಂಗ್ ಮಾಡೆಲ್, ಬೆಂಕಿ ಇಲ್ಲದೆ ನಾನಾ ರೀತಿಯ ಅಡುಗೆ, ವಿವಿಧ ಮಾದರಿಯ ರಂಗೋಲಿಗಳು ಸಾಕ್ಷಿಯಾಗಿದೆ. ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿ ಜಿತೇಶ್ ಬಿ.ಎಸ್, ಸಾಮಾನ್ಯ ಸೈಕಲನ್ನು ಎಲೆಕ್ಟ್ರಿಕ್ ಸೈಕಲ್ ಆಗಿ ಪರಿವರ್ತನೆ ಮಾಡಿ ಮೋಟರ್ ಕಿಟ್, ಬ್ಯಾಟಲ ಮುಂತಾದವನ್ನು ಬಳಕೆ ಮಾಡಿಕೊಂಡು ಅದ್ಭುತ ಸೈಕಲ್ ತಯಾರು ಮಾಡಿದ್ದಾನೆ.
ದ್ವಿತೀಯ ವಾಣಿಜ್ಯ ಬಿ ವಿಭಾಗದ ವಿದ್ಯಾರ್ಥಿಗಳಾದ ಆದರ್ಶ್ ಮತ್ತು ಧನುಶ ಎಂಬ ವಿದ್ಯಾರ್ಥಿಗಳು ಒಟ್ಟು ಸೇರಿ ಉಚಿತ ಶಕ್ತಿ ಪರಿವರ್ತಕ ಮಾಡಿದ್ದಾರೆ ಇದಕ್ಕೆ ವಯರ್, ಬ್ಯಾಟರಿ, 2 ಎಲ್.ಇ.ಡಿ ಬಲ್ಲು, ಬೆಲ್ಟ್, ಕೆಪಾಸಿಟರ್ ಬಳಕೆ ಮಾಡಲಾಗಿದೆ.
ದ್ವಿತೀಯ ವಿಜ್ಞಾನ ವಿಭಾಗದ ಧನ್ಯಶ್ರೀ ಮತ್ತು ದೀಕ್ಷಾ ಇವರು ನೀರಿನ ವಿತರಕ ಮತ್ತು ಉಸಿರಾಟದ ವ್ಯವಸ್ಥೆಯ ರಚನೆ ಮಾಡಿದ್ದಾರೆ. ನೀರಿನ ವಿತರಕಕ್ಕೆ ಪ್ಲಾಸ್ಟಿಕ್ ಬಾಟಲ್, ಸ್ಟ್ರಾ ಪ್ಲಾಸ್ಟಿಕ್ ಲೋಟ ಮುಂತಾದವನ್ನು ಬಳಕೆ ಮಾಡಿದ್ದಾರೆ. ಉಸಿರಾಟದ ವ್ಯವಸ್ಥೆಯ ವಿಧಾನಕ್ಕೆ ಬಲೂನ್, ಪ್ಲಾಸ್ಟಿಕ್ ಪೈಪ್, ಇಂಜೆಕ್ಷನ್ ಮುಂತಾದವನ್ನು ಬಳಕೆ ಮಾಡಿದ್ದಾರೆ. ದ್ವಿತೀಯ ವಿಜ್ಞಾನ ತರಗತಿಯ ಸೌಜನ್ಯ ಮತ್ತು ಸರಿತಾ ಇವರು ಭೂಕಂಪನದ ಬಗ್ಗೆ ತಿಳಿಯಲು ರಿಕ್ಟರ್ ಮಾಪಕ ಹೋಲುವ ಯಂತ್ರವನ್ನು ಕಂಡುಹಿಡಿದಿದ್ದಾರೆ. ಅದಕ್ಕೆ ಅವರು ಬಾ ವಯರ್, ದೋಲು ಮುಂತಾದ ಉಪಕರಣವನ್ನು ಬಳಸಿಕೊಂಡಿದ್ದಾರೆ.
ದ್ವಿತೀಯ ವಾಣಿಜ್ಯ ಎ ವಿಭಾಗದ ತುಳಸಿ ಮತ್ತು ಸುಮಿತ್ರಾ ಇವರು ವಯ ಬಳಕೆಯಿಲ್ಲದೆ ವಿದ್ಯುತ್ ಪ್ರವಾಹವನ್ನು ಕಂಡು ಹಿಡಿದಿದ್ದಾರೆ. ಇದಕ್ಕೆ ಅವರು ಪೈಪ್, ಚಾರ್ಜರ್, ಬ ಮುಂತಾದವನ್ನು ಬಳಸಿಕೊಂಡಿದ್ದಾರೆ.
ಪ್ರಥಮ ವಾಣಿಜ್ಯ ಎ ವಿಭಾಗದ ವಿದ್ಯಾರ್ಥಿಗಳಾದ ಅಭಿಜಿತ್ ಮತ್ತು ನವೀನ್ ನೈಟ್ ಎಂಬ ಯಂತ್ರವನ್ನು ಕಂಡುಹಿಡಿದಿದ್ದಾರೆ. ದ್ವಿತೀಯ ವಿಜ್ಞಾನ ವಿಭಾಗದ ಮುಜೈನ್ ಅಲಿ, ಮಹಮ್ಮದ್ ತನ್ಸಿರ್, ಮಹಮ್ಮದ್ ಅಕ್ರಮ್,, ಮಹಮ್ಮದ್ ಜಾಬೀರ್, ಮಹಮ್ಮದ್ ಸಾಹಿಲ್ ಇವರು ಥರ್ಮಕೋಲ್ ನಿಂದ ಕಾಲೇಜಿನ ಮಾದರಿ ಮಾಡಿದ್ದಾರೆ.
40 ವಿದ್ಯಾರ್ಥಿಗಳ 20 ತಂಡ ಸೇರಿ ಬೆಂಕಿ ಇಲ್ಲದೆ ಹಲವು ಬಗೆಯ ತಿನಸು ತಯಾರಿ ಮಾಡಿದ್ದಾರೆ. 54 ವಿದ್ಯಾರ್ಥಿಗಳು ಸೇರಿ ನವೀನ ವಿನ್ಯಾಸದ ರಂಗೋಲಿ ಬಿಡಿಸಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ 5 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ, ಆಯ್ಕೆಯಾಗಿದ್ದಾರೆ.
ಕರಾಟೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಅದ್ಭುತ ಸಾಧನೆ ಗೈದು ಚಿನ್ನ, ಬೆಳ್ಳಿ, ಮತ್ತು ಕಂಚಿನ ಪದಕ ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಾಧನೆ ಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಎಂದರು . ಪತ್ರಿಕಾ ಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್, ಪದವಿ ಕಾಲೇಜು ಪ್ರಾಂಶುಪಾಲೆ ಡಾ. ಸವಿತಾ ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.