ಮಡಂತ್ಯಾರ್: ಪಾರಂಕಿ ಗ್ರಾಮದ ಮಾರಿಗುಡಿ ಮಾರಿಕಾಂಬ ದೇವಿ ಸನ್ನಿಧಿ ಯಲ್ಲಿ ವಿಶೇಷ ನವರಾತ್ರಿ ಪೂಜೋತ್ಸವ 27ರಂದು ನಡೆಯಿತು .
ಮಾರಿಕಾಂಬ ಭಜನಾ ಮಂಡಳಿ ವತಿಯಿಂದ ಭಜನ ಸೇವೆ , ಮಾರಿಕಾಂಬಾ ದೇವಿಗೆ ವಿಶೇಷ ದೀಪ ಆರಾಧನೆ, ದೈವಗಳಿಗೆ ಅಗೆಲು ಸೇವೆ, ಸಾರ್ವಜನಿಕರಿಗೆ ಅನ್ನ ಸಂತರ್ಪಣೆಯೊಂದಿಗೆ ಪ್ರಸಾದ ವಿತರಣೆ ನಡೆಯಿತು.
ಪಾರಂಕಿ ದೇವಸ್ಥಾನದ ಅರ್ಚಕರಾದ ಟಿ. ವಿ.ಶ್ರೀಧರ್ ರಾವ್, ಅನುವಂಶಿಕ ಆಡಳಿತ ಮುಖ್ಯಸ್ಥರಾದ ಕೆ ಸನತ್ ಕುಮಾರ್ ಮಡಿವಾಳ್ ,ಅಧ್ಯಕ್ಷರಾದ ರಾಮಣ್ಣ ಪೂಜಾರಿ ,ಉಪಾಧ್ಯಕ್ಷರಾದ ಜಯಂತಿ ಹಾರಬೆ ,ಕಾರ್ಯದರ್ಶಿ ಕಾಂತಪ್ಪ ಗೌಡ, ಜೊತೆ ಕಾರ್ಯದರ್ಶಿ ಕಿಶೋರ್ ಶೆಟ್ಟಿ, ಕೋಶಾಧಿಕಾರಿ ಡಾಕ್ಟರ್ ಕೆ ಎಸ್ ಬಲ್ಲಾಳ್ ,ಭಜನಾ ಮಂಡಳಿ ಅಧ್ಯಕ್ಷರಾದ ಹೇಮಾವತಿ ಶೆಟ್ಟಿ, ಕಾರ್ಯದರ್ಶಿ ಸದಾನಂದ ಆಚಾರ್ಯ ,ದೇವಾಲಯದ ಅರ್ಚಕರಾದ ಯೋಗೀಶ್ ಹೆಗ್ಡೆ ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು . ಮುಖ್ಯ ನಿರ್ವಹಣೆಯನ್ನು ಡಾ ಕೆ ಯಸ್ ಬಲ್ಲಾಳ್ ನಿರ್ವಹಿಸಿದರು.