ವೇಣೂರು: ಕುಕ್ಕೇಡಿ ಹಾಲು ಉತ್ಪಾದಕರ ಸಹಕಾರ ಸಂಘದ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ವಠಾರದಲ್ಲಿ ಜರುಗಿತು.
ಸಂಘದ ಅಧ್ಯಕ್ಷ ಬಿ. ನಿರ್ಮಲ್ ಕುಮಾರ್ ಅವರು ಸಭೆಯ ಅಧ್ಯಕ್ಷತೆ ವಹಿಸಿ, ವರದಿ ಸಾಲಿನಲ್ಲಿ ಸಂಘವು ರೂ. 10,80,382.23 ಲಕ್ಷ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 20 ಡಿವಿಡೆಂಟ್ ನೀಡಲಾಗಿದೆ. ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು, ಸಂಘದ ಪ್ರಗತಿಗೆ ನಿರ್ದೇಶಕರು, ಸದಸ್ಯರ ಹಾಗೂ ಒಕ್ಕೂಟದ ಸಹಕಾರ ನಿರಂತರ ಲಭಿಸಿದೆ ಎಂದರು. ದ.ಕ. ಹಾಲು ಒಕ್ಕೂಟದ ಪಶು ವೈದ್ಯಾಧಿಕಾರಿ ಡಾ| ಪೂಜಾ ಅವರು ನಿಯಮಿತ ಆಹಾರ ಮತ್ತು ಪಶುಗಳ ಆರೈಕೆಯ ಬಗ್ಗೆ ಮಾಹಿತಿ ನೀಡಿದರು.
ಎಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಗರಿಷ್ಠ ಹಾಲು ಪೂರೈಸುತ್ತಿದ್ದ 12 ಮಂದಿ ಸದಸ್ಯರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಉಪಾಧ್ಯಕ್ಷ ಗಣೇಶ್ ಕುಂದರ್, ನಿರ್ದೇಶಕರುಗಳಾದ ಗುಮ್ಮಣ್ಣ ನಾಯ್ಕ, ಧರ್ಣಪ್ಪ ಪೂಜಾರಿ, ದಯಾನಂದ ಶೆಟ್ಟಿ, ಶ್ರೀಮತಿ ಹೇಮಾವತಿ, ಶ್ರೀಮತಿ ದೀಪಾ, ದಿನೇಶ್ ಮೂಲ್ಯ, ದಯಾನಂದ ದೇವಾಡಿಗ, ಪುರುಷೋತ್ತಮ ಮಂಗಲತೇರು ಹಾಗೂ ಅರುಣ್ ಮೋನಿಸ್ ಉಪಸ್ಥಿತರಿದ್ದರು. ಕಾರ್ಯನಿರ್ವಹಣಾಧಿಕಾರಿ ಧರಣೇಂದ್ರ ಜೈನ್ ವರದಿ ಮಂಡಿಸಿ, ಸಭೆಯನ್ನು ನಿರ್ವಹಿಸಿದರು. ನಿರ್ದೇಶಕ ತಿಮ್ಮಪ್ಪ ಸ್ವಾಗತಿಸಿ, ನಿರ್ದೇಶಕ ಸುರೇಶ್ ಶೆಟ್ಟಿ ವಂದಿಸಿದರು. ಸಂಘದ ಸಿಬ್ಬಂದಿ ಸಹಕರಿಸಿದರು.