ಬೆಳ್ತಂಗಡಿ: ಸೋಮಂತಡ್ಕ ಬದ್ರಿಯಾ ಜುಮ್ಮಾ ಮಸ್ಜಿದ್ ಜಮಾಅತ್ನ ಸದಸ್ಯರು, ಹೆಲ್ಸ್ಲೈನ್ ಬಳಗದ ಪ್ರೋತ್ಸಾಹಕರು ಹಾಗೂ ಹಿತೈಷಿಗಳಾಗಿದ್ದು ಪ್ರಸ್ತುತ ಮಂಜೇಶ್ವರದ ಮಚ್ಚಂಪಾಡಿಯಲ್ಲಿ ನೆಲೆಸಿರುವ ಇಸ್ಮಾಯಿಲ್ ಆಲಿಕುಂಞಿ ಮತ್ತು ಅವರ ಪತ್ನಿ ಫಾತಿಮಾ ಅವರು ಪವಿತ್ರ ಉಮ್ರಾ ಯಾತ್ರೆಗಾಗಿ ಸೌದಿ ಅರೇಬಿಯಾಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಅವರನ್ನು ಮುಂಡಾಜೆ ಹೆಲ್ಪ್ಲೈನ್ ಬಳಗದ ವತಿಯಿಂದ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಅಯೂಬ್ ಆಲಿಕುಂಞಿ ಅವರ ಮನೆಯಲ್ಲಿ ನಡೆದ ಈ ಅಭಿನಂದನಾ ಭೇಟಿಯಲ್ಲಿ ಹೆಲ್ಪ್ಲೈನ್ ಬಳಗದ ಚೀಫ್ ಎಡ್ಮಿನ್ ಸಿದ್ದೀಕ್ ಸಾಗರ್, ಎಡ್ಮಿನ್ ಪ್ರಮುಖರಾದ ಇಸ್ಹಾಕ್ ಯು.ಎ, ಹಮೀದ್ ನೆಕ್ಕರೆ, ಸಿದ್ದೀಕ್ ಮಲಬಾರ್, ಇಬ್ರಾಹಿಂ ಮಸೀದಿ ಬಳಿ, ಅಯೂಬ್ ಬೆಂಗಳೂರು, ಅಯೂಬ್ ಆಲಿಕುಂಞಿ ಮತ್ತು ಅಶ್ರಫ್ ಆಲಿಕುಂಞಿ ಇವರು ಉಪಸ್ಥಿತರಿದ್ದರು.