ಬೆಳಾಲಿನಲ್ಲಿ ಕಬ್ಬಡಿ ಮತ್ತು ಖೋಖೊ ಪಂದ್ಯಾಟ

0

ಬೆಳಾಲು :ಬೆಳಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗರಿಕರಿಗಾಗಿ ಕಬಡ್ಡಿ ಮತ್ತು ಖೋಖೊ ಪಂದ್ಯಾಟ ಅ.2 ರಂದು ಬೆಳಾಲು ಶ್ರೀ ಧ. ಮ.ಪ್ರೌಢ ಶಾಲೆಯಲ್ಲಿ ನಡೆಯಿತು ಉದ್ಘಾಟನಾ ಸಮಾರಂಭದಲ್ಲಿ ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಯಂತಿ, ಉಪಾಧ್ಯಕ್ಷ ಸತೀಶ್ ಎಳ್ಳುಗದ್ದೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್, ಕಾರ್ಯದರ್ಶಿ ಮೋಹನ ಬಂಗೇರ, ಗ್ರಾಮ ಪಂ. ಸದಸ್ಯರು, ಹೈಸ್ಕೂಲ್ ಮುಖ್ಯ ಉಪಾಧ್ಯಾಯ ರಾಮಕೃಷ್ಣ ಭಟ್ , ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸುಲೈಮಾನ್ ಭೀಮಂಡೆ, ನೋಟರಿ ವಕೀಲರು ಶ್ರೀನಿವಾಸ ಗೌಡ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಮಧುರ ಹಾಗೂ ಸಂಜೀವಿನಿ ಸದಸ್ಯರು, ಸ್ತ್ರೀಶಕ್ತಿ ಸಂಘದ ಸದಸ್ಯೆಯರು, ಮಾಯಾ ಫ್ರೆಂಡ್ಸ್ ನ ಅಧ್ಯಕ್ಷ ರಾಧಾಕೃಷ್ಣ ಮಾಯಾ, ಶಶಿಧರ ಆಚಾರ್ಯ ಶಿಲ್ಪಿ, ಊರಿನ ವಿವಿಧ ಸಂಘ ಸಂಸ್ಥೆಗಳ ಸಂಸ್ಥೆಗಳ ಸದಸ್ಯರು, ಪದಾಧಿಕಾರಿಗಳು, ಮಹಿಳೆಯರು, ಶಾಲಾ ಮಕ್ಕಳು ಭಾಗವಹಿಸಿದ್ದರು.
ದೈಹಿಕ ಶಿಕ್ಷಣ ನಿರ್ದೇಶಕ ಧರ್ಮೆಂದ್ರ ಕುಮಾರ್ , ಕೃಷ್ಣಾನಂದ ರಾವ್ , ರವಿಚಂದ್ರ ಜೈನ್ ಹಾಗೂ ಈ ಕ್ರೀಡಾ ಕೂಟ ಸಂಘಟಕ ಪಂಚಾಯತ್ ಸಿಬಂದಿ ಶಶಿಧರ ಓಡಿಪ್ರೋಟ್ಟು ಇನ್ನಿತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here