ಕುಕ್ಕೇಡಿ: ಕುಕ್ಕೆಡಿ ಗ್ರಾಮಪಂಚಾಯತಿನಲ್ಲಿ ಗಾಂಧಿ ಜಯಂತಿ ಹಾಗೂ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ ಮತ್ತು ವಿಶೇಷ ಗ್ರಾಮ ಸಭೆಯನ್ನು ಕುಕ್ಕೆಡಿ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಅ.2 ರಂದು ಹಮ್ಮಿಕೊಳ್ಳಲಾಯಿತು.
ಸಭೆಯಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷ ಜನಾರ್ಧನ್, ಉಪಾಧ್ಯಕ್ಷರು, ಸದಸ್ಯರು , ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಾದ ನವೀನ್, ದಕ್ಷಿಣ ಕನ್ನಡ ಜಿಲ್ಲಾ ಅನುಷ್ಠಾನ ಬೆಂಬಲ ಸಂಪನ್ಮೂಲ ಸಂಸ್ಥೆ ಸಿಬ್ಬಂದಿ ಪುಷ್ಪಲತಾ,ಕುಕ್ಕೇಡಿ, ನಿಟ್ಟಡೆ ಗ್ರಾಮಸ್ಥರು , ಕುಕ್ಕೇಡಿ ಗಾಮ ಪಂಚಾಯತ್ ಕಛೇರಿ ಸಿಬ್ಬಂದಿಗಳು, ಹಾಗೂ ಸಂಜೀವಿನಿ ಒಕ್ಕೂಟದ ಸದಸ್ಯರು ಭಾಗವಹಿಸಿದರು.