ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಖ್ಯಾತ ಕನ್ನಡ ಚಲನಚಿತ್ರ ನಟ ರಕ್ಷಿತ್ ಶೆಟ್ಟಿ ಅ.3ರಂದು ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.
ದರ್ಶನದ ವೇಳೆ ರಾಜೇಂದ್ರ ದಾಸ್, ಉದ್ಯಮಿಗಳಾದ ರಾಜೇಶ್ ಶೆಟ್ಟಿ ನವಶಕ್ತಿ, ರವಿಚಕ್ಕಿತ್ತಾಯ ಉಜಿರೆ ಇವರು ಜೊತೆಗಿದ್ದರು. ಇದೇ ವೇಳೆ ಡಿ ಹರ್ಷೇಂದ್ರ ಕುಮಾರ್ ರವರನ್ನು ಭೇಟಿ ನೀಡಿ ಅಭಿನಂದಿಸಿದರು.
ಓಶಿಯನ್ ಪರ್ಲ್ ಗೆ ಭೇಟಿ ನೀಡಿದ ರಕ್ಷಿತ್ ಶೆಟ್ಟಿ:
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ರಕ್ಷಿತ್ ಶೆಟ್ಟಿ ನಂತರ ಉಜಿರೆ ಕಾಶಿ ಪ್ಯಾಲೆಸ್ ನಲ್ಲಿ ನೂತನವಾಗಿ ಲೋಕಾರ್ಪಣೆಗೊಂಡ ದಿ ಓಷ್ಯನ್ ಪರ್ಲ್ ಗೆ ಭೇಟಿ ನೀಡಿ ಹೋಟೆಲನ್ನು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಅಭಿನಂದನೆಯನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಕಾಶಿ ಪ್ಯಾಲೇಸ್ ಮಾಲಕರಾದ ಶಶಿಧರ್ ಶೆಟ್ಟಿ ನವಶಕ್ತಿ, ರಾಜೇಶ್ ಶೆಟ್ಟಿ ನವಶಕ್ತಿ ಹಾಗೂ ದಿ ಓಷ್ಯನ್ ಪರ್ಲ್ ಆಡಳಿತ ವರ್ಗ ಉಪಸ್ಥಿತರಿದ್ದರು.