ನಡ: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಮಿತಿ ನಡ ಇದರ ವತಿಯಿಂದ ಗೌರವ ಅಧ್ಯಕ್ಷರಾದ ಹರೀಶ್ ಕುಮಾರ್ ಶಾಸಕರು ವಿಧಾನ ಪರಿಷತ್ ಬೆಂಗಳೂರು ಇವರ ಸಹಕಾರದೊಂದಿಗೆ ಪ್ರತಿ ತಿಂಗಳು ಪ್ರಥಮ ಆದಿತ್ಯ ವಾರ ಗುರುಪೂಜೆ ಹಾಗೂ ಮಾಸಿಕ ಸಭೆ ನಡೆಯುತ್ತಿದ್ದು, ಈ ತಿಂಗಳ ಸಭೆಯಲ್ಲಿ ಅನಾರೋಗ್ಯ ಪೀಡಿತರಾಗಿರುವ ಸಂಘದ ಸದಸ್ಯರಾದ ಧರ್ಣಪ್ಪ ಪೂಜಾರಿ ಪಣೆಕ್ಕಲ ನಡ ಇವರಿಗೆ ಸಂಘದ ಸ್ವಜಾತಿ ಬಂಧುಗಳಿಂದ ಧನ ಸಹಾಯ ಪಡೆದು ಸಹಾಯಧನ ವಿತರಿಸಲಾಯಿತು. ಇದನ್ನು ಸಂಘದ ಅಧ್ಯಕ್ಷರಾದ ವೀರಪ್ಪ ಪೂಜಾರಿ ಕೊಟ್ಲಪ್ಪಾಡಿ ವಿತರಿಸಿದರು.
ಈ ಸಂಧರ್ಭದಲ್ಲಿ ಉಪಾಧ್ಯಕ್ಷರಾದ ದಿವಾಕರ ಸಾಲ್ಯಾನ್ ಸುರ್ಯ, ಕೋಶಾಧಿಕಾರಿ ಸಂತೋಷ್ ಕುಮಾರ್ ಕೇಳ್ತಾಜೆ, ನಡ ಯುವ ಬಿಲ್ಲವ ವೇದಿಕೆ ಯ ಅಧ್ಯಕ್ಷರಾದ ಕಾರ್ತಿಕ್ ಕುಮಾರ್, ಕಾರ್ಯದರ್ಶಿ ಪ್ರೇಮ್ ಸಾಗರ್ ಹಾಗೂ ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷರಾದ ವಸಂತಿ ವಸಂತ ಕುತ್ರೊಟ್ಟು, ಕೋಶಾಧಿಕಾರಿ ಗೀತಾ ಯಶೋಧರ , ಬಿಲ್ಲವ ಅಸೋಷಿಯೇಷನ್ ಬೆಂಗಳೂರು ಇದರ ನಿರ್ದೇಶಕರಾದ ಆದರ್ಶ ನೂಚಿಲ, ಸಂಘದ ಮಾಜಿ ಅಧ್ಯಕ್ಷರಾದ ರಮೇಶ್ ಕೋಟ್ಯಾನ್ ಕುತ್ರೊಟ್ಟು, ಗೌರವ ಸಲಹೆಗಾರರಾದ ದೇವೇಂದ್ರ ಪೂಜಾರಿ ಕುದುಪುಲ, ಕೃಷ್ಣಪ್ಪ ಪೂಜಾರಿ ಕುದುಪುಲ, ತುಂಗಪ್ಪ ಪೂಜಾರಿ ಹೊಕ್ಕಿಲ, ಜಯಾನಂದ ಕೂಡೇಲು, ಜಗದೀಶ್ ನಡ, ವೀರಪ್ಪ ಪೂಜಾರಿ ಪಿಲಿಕೂಡೇಲು ಹಾಗೂ ನಡ ಬಿಲ್ಲವ ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.