ನೆರಿಯ ಅಪ್ಪೆಲ ಶ್ರೀ ಉಮಾ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಸರಸ್ವತಿ ಪೂಜೆ ಅ 5 ರಂದು ನಡೆಯಿತು.
ಶೀಲಾ ಪದ್ಯಾಣ ಗಣಪತಿ ಭಟ್ ಮತ್ತು ಸಹೋದರಿಯರಿಂದ ಲಲಿತಾ ಸಹಸ್ರನಾಮ ಮತ್ತು ಸೌಂದರ್ಯ ಲಹರಿ ಪಾರಾಯಣ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಆಡಳಿತ ಮುಕ್ತೇಸರರ ನೆರಿಯ ಮನೆತನದ ರಾಜಗೋಪಾಲ್ ಹೆಬ್ಬಾರ್ ಹಾಗೂ ಅವರ ಧರ್ಮಪತ್ನಿ, ಸೂರಜ್ ಹೆಬ್ಬಾರ್ ರಾಮ್ ಕುಮಾರ್ ಬೋವಿನಡಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ದೇವಸ್ಥಾನದ ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.