ನಾಳ : ನವರಾತ್ರಿ ಶರವನ್ನ ರಾತ್ರಿ ವಿಶೇಷ ಪೂಜೆ ಹಾಗೂ ವಿಜಯ ದಶಮಿ ದಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶಾಸಕ ಹರೀಶ್ ಪೂಂಜ ರವರು ಅ.5 ರಂದು ಭೇಟಿ ನೀಡಿ ದೇವರ ಪಡೆದರು. ಅನ್ನದಾನದ ಸೇವಕರ್ತರಾಗಿ ಭಕ್ತಾದಿಗಳಿಗೆ ಅನ್ನದಾನ ಸೇವೆ ನೀಡಿದರು.
ಈ ಸಂದರ್ಭದಲ್ಲಿ ಕಳಿಯ ಗ್ರಾಮ ಪಂಚಾಯತ್ ಹಾಗೂ ನಾಳ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಸುಧಾಕರ ಮಜಲು ಶಾಲು ಹೊದಿಸಿ ಗೌರವಿಸಿದರು. ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ.ರಾಘವೇಂದ್ರ ಅಸ್ರಣ್ಣ ಫಲಪುಷ್ಪ ನೀಡುವ ಮೂಲಕ ದೇವರ ಪ್ರಸಾದ ನೀಡಿದರು.
ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಭುವನೇಶ್ ಜಿ. ಸಹಕಾರಿ ಭಾರತಿ ಅಧ್ಯಕ್ಷರಾದ ರಾಜೇಶ್ ಪೆಂರ್ಬುಡ,ಸ್ಥಳೀಯರಾದ ಬಾಲಕೃಷ್ಣ ಮಜಲು,ಸದಾಶಿವ ನಾಳ,ಹಾಗೂ ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.