ಬೆಳ್ತಂಗಡಿ: ಸೀತಾನದಿ ಗಣಪಯ್ಯ ಶೆಟ್ಟಿ ಪ್ರತಿಷ್ಠಾನ ಇವರ 35ನೇ ವರ್ಷದ ಸಂಸ್ಮರಣೆ – ಪ್ರಶಸ್ತಿ ಪ್ರಧಾನ ಅಭಿನಂದನಾ ಕಾರ್ಯಕ್ರಮವು ಶ್ರೀ ಶಿವದರ್ಶನ್ ಆಗ್ರೋ ಇಂಡಸ್ಟೀಸ್ , ಹಂಸಗಿರಿ ಬದ್ಯಾರಿನಲ್ಲಿ ಅ.4ರಂದು ನೆರವೇರಿತು.
ಈ ಕಾರ್ಯಕ್ರಮದ ಸಭಾಧ್ಯಕ್ಷರಾದ ಸೀತಾನದಿ ಗಣಪಯ್ಯ ಶೆಟ್ಟಿ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪಿ. ಕಿಶನ್ ಶೆಟ್ಟಿ ವಹಿಸಿದ್ದರು. ಶ್ರೀ .ಧ.ಮಂ ಶಿಕ್ಷಣ ಸಂಸ್ಥೆ ಉಜಿರೆ – ಧರ್ಮಸ್ಥಳದ ಕಾರ್ಯದರ್ಶಿ ಡಿ. ಹರ್ಷೇಂದ್ರ ಹೆಗ್ಗಡೆ ಮತ್ತು ತುಳುಕೂಟ ಬರೋಡಾ ಅಧ್ಯಕ್ಷರಾದ ಶ್ರೀ ಶಶಿಧರ ಶೆಟ್ಟಿ ಉಪಸ್ಥಿತರಿದ್ದರು.
ಅಶೋಕ್ ಕುಮಾರ್ ಪ್ರತಿಷ್ಠಾನದ ಕೋಶಾಧಿಕಾರಿ ಇವರು ಸ್ವಾಗತಿಸಿದರು. ಬಾಲಕೃಷ್ಣ ಸಿ ನಾಯಕ್ ಕಾರ್ಯಕ್ರಮ ಸಂಯೋಜಕರು ಹಂಸಗಿರಿ ಪ್ರಾಧ್ಯಪಕರು ಉದಯ ಕುಮಾರ್ ಶೆಟ್ಟಿ, ದೇವದಾಸ ಈಶ್ವರ ಪತ್ರಕರ್ತರು ಉಪಸ್ಥಿತರಿದ್ದರು.