ಬೆಳಾಲು ಗೌಡರ ಸಂಘದ ವತಿಯಿಂದ ಸ್ವಚ್ಛತಾ ಅಭಿಯಾನ

0

ಬೆಳಾಲು : ಗೌಡರ ಯಾನೆ ಒಕ್ಕಲಿಗರ ಗ್ರಾಮ ಸಮಿತಿ,ಯುವ ವೇದಿಕೆ, ಮಹಿಳಾ ವೇದಿಕೆಯ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಬೆಳಾಲು ಮತ್ತು ಅರಣ್ಯ ಸಮಿತಿ ಬೆಳಾಲು ಇದರ ಸಹ ಭಾಗಿತ್ವದಲ್ಲಿ ಅ.9 ರಂದು ಗ್ರಾಮ ಸ್ವಚ್ಛತಾ ಅಭಿಯಾನ ನಡೆಯಿತು.

ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸಂಘದ ಗೌರವ ಅಧ್ಯಕ್ಷ ಎಚ್. ಪದ್ಮ ಗೌಡ ಅಭಿಯಾನಕ್ಕೆ ಚಾಲನೆ ನೀಡಿದರು.

ಗ್ರಾಮ ಸಮಿತಿ ಅಧ್ಯಕ್ಷ ಎಸ್. ವಿಜಯ ಗೌಡ, ಕಾರ್ಯದರ್ಶಿ ಧರ್ಮೇಂದ್ರ ಗೌಡ ಪುಚ್ಚೆಹಿತ್ಲು, ಗ್ರಾಮ ಸಮಿತಿಯ ಗೌರವ ಅಧ್ಯಕ್ಷ ಸುರೇಂದ್ರ ಗೌಡ ಎಸ್., ಯುವ ವೇದಿಕೆಯ ಅಧ್ಯಕ್ಷ ಉಮೇಶ್ ಗೌಡ ಮಂಜೊತ್ತು, ಕಾರ್ಯದರ್ಶಿ ಸಂಜೀವ ಗೌಡ ಕಾಡಂಡ, ಗೌರವ ಅಧ್ಯಕ್ಷ ಮಹೇಶ್ ಪುಳಿತ್ತಡಿ, ಮಹಿಳಾ ವೇದಿಕೆಯ ಕಾರ್ಯದರ್ಶಿ ಲತಾ ಕೇಶವ ಗೌಡ, ಕೋಶಾಧಿಕಾರಿ ಲೀಲಾ ವೀರಣ್ಣ ಗೌಡ,ಬೆಳಾಲು ಗ್ರಾಮ ಸಮಿತಿ ಉಸ್ತುವಾರಿ ಉಷಾದೇವಿ ಕಿಣ್ಯಾಜೆ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಗಂಗಾಧರ ಗೌಡ ಸುರುಳಿ,ಎಲ್ಲಾ ಸಮಿತಿಗಳ ಸದಸ್ಯರು, ಊರಿನ ನಾಗರೀಕರು ಪುಟಾಣಿಗಳು ಭಾಗವಹಿಸಿದ್ದರು.

ಬೆಳಾಲು ಪೇಟೆ, ಮಾಯಾ, ಓಣಿಯಾಲು, ದೊಂಪದಪಲ್ಕೆಯಲ್ಲಿ ಸ್ವಚ್ಛತೆ ಮಾಡಲಾಯಿತು. ಧರ್ಮೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here