ಉಣ್ಣಾಲು ಮತ್ತು ಎರುಕಡಪ್ಪು ಮೊಹಲ್ಲಾದ ಬೃಹತ್ ಮೀಲಾದ್ ಜಾಥಾ

0

ಕೊಯ್ಯೂರು: ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ 1497 ನೇ ಜನ್ಮದಿನಾಚರಣೆಯ ಪ್ರಯುಕ್ತ ಕೊಯ್ಯೂರು ಗ್ರಾಮದ ಉಣ್ಣಾಲು ಸಿರಾಜುಲ್ ಹುದಾ ಜುಮಾ ಮಸೀದಿ ಆಡಳಿತ ಸಮಿತಿ ಹಮ್ಮಿಕೊಂಡಿದ್ದ ಐತಿಹಾಸಿಕ ಮೀಲಾದ್ ಜಾಥಾ ಅ.9 ರಂದು  ಉಣ್ಣಾಲಿನಿಂದ ಪ್ರಾರಂಭಗೊಂಡು ಆದೂರುಪೆರಾಲ್, ಎರುಕಡಪ್ಪು ಮಾರ್ಗವಾಗಿ ಪರಪ್ಪು ತಲುಪಿ ಫಕೀರ್ ವಲಿಯುಲ್ಲಾಹಿ ರ.ಅ ರವರ ಝಿಯಾರತ್ ನೊಂದಿಗೆ ಸಮಾಪ್ತಿಗೊಂಡಿತು.

ಈ ಕಾರ್ಯಕ್ರಮದಲ್ಲಿ ಜಮಾ‌ಅತಿನ ಆಡಳಿತ ಸಮಿತಿಯ ಪ್ರಮುಖ ನಾಯಕರು,ವಿವಿಧ ಸಂಘಗಳ ಪದಾಧಿಕಾರಿಗಳು, ಕಾರ್ಯಕರ್ತರು, ಅಧ್ಯಾಪಕ ವೃಂದದವರೂ, ಮದ್ರಸಾ ವಿದ್ಯಾರ್ಥಿಗಳು ಹಾಗೂ ಅನೇಕ ಪ್ರವಾದಿ ಪ್ರೇಮಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here