ವೇಣೂರು: ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ ವೇಣೂರು ಘಟಕದ ಆತಿಥ್ಯದಲ್ಲಿ ಮೂಡುಕೋಡಿಯಲ್ಲಿ ನಡೆದ ಕೆಸರ್ದ ಗೊಬ್ಬು ಕ್ರೀಡಾಕೂಟದ ಮಹಿಳೆಯರ ವಿಭಾಗದ ತ್ರೋಬಾಲ್ ಪಂದ್ಯಾವಳಿಯಲ್ಲಿ ಪ್ರಥಮ,ಹಗ್ಗಜಗ್ಗಾಟದಲ್ಲಿ ಪ್ರಥಮ,ಪುರುಷರ ಕಬ್ಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಬೆಳ್ತಂಗಡಿ ಘಟಕ ಗುಂಪು ಅಟಗಳಲ್ಲಿ ಸಾರ್ವಾಧಿಕ ಪ್ರಶಸ್ತಿ ಪಡೆದುಕೊಂಡಿರುತ್ತದೆ.
ಈ ಸಂಧರ್ಭದಲ್ಲಿ ಘಟಕದ ಅಧ್ಯಕ್ಷೆ ಸುಜಾತ ಅಣ್ಣಿ ಪೂಜಾರಿ, ಗೌರವ ಸಲಹೆಗಾರರಾದ ರಮಾನಂದ ಸಾಲ್ಯಾನ್,ಸ್ಥಾಪಕಾಧ್ಯಕ್ಷ ರಾಕೇಶ್ ಕುಮಾರ್ ಮೂಡುಕೋಡಿ,ಮಾಜಿ ಅಧ್ಯಕ್ಷರುಗಳಾದ ಪ್ರಶಾಂತ್ ಮಚ್ಚಿನ,ಹರೀಶ್ ಕನ್ಯಾಡಿ,ಕೇಂದ್ರ ಸಮಿತಿ ಸಂ.ಕಾರ್ಯದರ್ಶಿ ಎಂ.ಕೆ.ಪ್ರಸಾದ್ ಘಟಕದ ಪದಾಧಿಕಾರಿಗಳಾದ ಸಂತೋಷ್ ಅರಳಿ,ಸದಾಶಿವ ಊರ,ಜಯರಾಜ್ ನಡಕ್ಕರ,ಯಶೋಧರ ಚಾರ್ಮಾಡಿ, ಅಶ್ವಥ್ ಕುಮಾರ್,ಸುದಾಮಣಿ ರಮಾನಂದ,ಸುನಿಲ್ ಕನ್ಯಾಡಿ,ಉಮೇಶ್ ಸುವರ್ಣ, ಚಂದ್ರಹಾಸ ಬಳಂಜ,ವಿಜಯ ಶಿರ್ಲಾಲು ,ಯಶೋಧರ ಮುಂಡಾಜೆ,ಸೇವಂತಿ ಟೀಚರ್ ,ದೀಪಾ.ಎಸ್. ಸುವರ್ಣ,ಬೇಬಿಂದ್ರ,ಪೂರ್ಣಿಮಾ,ಸುಜೇಶ್ ಕುಮಾರ್ , ಕಿಶನ್ ಚಾರ್ಮಾಡಿ,ರತನ್ ಕುಮಾರ್, ಜ್ಞಾನೇಶ್ ಕಟ್ಟ ಮತ್ತಿತರರು ಕ್ರೀಡಾಳುಗಳು ಉಪಸ್ಥಿತರಿದ್ದರು.