ಗುರುವಾಯನಕೆರೆ : ಸಾನಿಧ್ಯಾ ಜ್ಯುವೆಲ್ಲರ್ಸ್ ಮಡಂತ್ಯಾರು ಅರ್ಪಿಸಿದ ಮೋಹನ್ ಬೆಳ್ತಂಗಡಿ ಸಪ್ತಸ್ವರಗಳ ಗಾನಯಾನ ಇದು ಗ್ರಾಮೀಣ ಪ್ರತಿಭೆಗಳ ಪುರಸ್ಕಾರ 250ನೇ ಸಂಚಿಕೆ ಗ್ರಾಂಡ್ ಫಿನಾಲೆಯು ಅ.9ರಂದು ಗುರುವಾಯನಕೆರೆ ನಮ್ಮ ಮನೆ ಹವ್ಯಕ ಭವನದಲ್ಲಿ ಜರುಗಿತು.
250ನೇ ಸಂಚಿಕೆ ಗ್ರಾಂಡ್ ಫಿನಾಲೆಯಲ್ಲಿ ಪ್ರಥಮ ಸ್ಥಾನ ಯೂಗೀಶ್ ಧರ್ಮಸ್ಥಳ, ದ್ವಿತೀಯ ಸರಸ್ವತಿ ಮಡಂತ್ಯಾರ್, ರನ್ನರ್ ಆಪ್ ಮಹೇಶ್ ಮಂಜೇಶ್ವರ ಮತ್ತು ಕಾರ್ತೀಕ್ ಸಜೀಪ ಪಡೆದುಕೊಂಡರು.
ಪ್ರಥಮ 5000 ಸಾವಿರ ಮತ್ತು ಗಿಪ್ಟ್ ವಾಚರ್ ಮತ್ತು ಸಪ್ತಸ್ವರಗಳ ಗಾನಯಾನದ ಸ್ಮರಣಿಕೆ, ದ್ವಿತೀಯ 2500 ಸಾವಿರ ಮತ್ತು ಗಿಪ್ಟ್ ವಾಚರ್ ಸ್ಮರಣಿಕೆ, ರನ್ನರ್ ಆಪ್ 1250 ಸಾವಿರ ಇಬ್ಬರಿಗೆ ಗಿಪ್ಟ್ ವಾಚರ್ ಸ್ಮರಣಿಕೆಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ದಿನಕರ ಆದೇಲು ,ಶ್ರೀನೀವಾಸ್ ಕುಲಾಲ್ ,ನಾಮ್ ದೇವ್ ಮುಂಡಾಜೆ, ಪ್ರವೀಣ್ ಹಳ್ಳಿಮನೆ,ಪ್ರವೀಣ್ ಕೂಟ್ಯಾನ್, ಪುರುಷೋತ್ತಮ ಹೆಗ್ಡೆ ಮಸ್ಕತ್, ಇವರುಗಳು ಉಪಸ್ಥಿತರಿದ್ದು, ಸಮಾರೋಪದಲ್ಲಿ ಭಾಸ್ಕರ್ ಧರ್ಮಸ್ಥಳ,ಶ್ರೀ ಜ್ಯೋತಿಂದ್ರ ಭಂಡಾರಿ ಬೆಂಗಳೂರು, ರಾಜೇಶ್ ಆಚಾರ್ಯ ಸಾನಿಧ್ಯ ಜುವೇಲರ್ಸ್ ಮಡಂತ್ಯಾರು ಇವರು ಭಾಗಿಯಾಗಿದ್ದರು.