ಕಕ್ಕಿಂಜೆ ಬೃಹತ್ ಉಚಿತ ದಂತ ಚಿಕಿತ್ಸಾ ಶಿಬಿರ

0

ಕಕ್ಕಿಂಜೆ :ಶ್ರೀ ಕೃಷ್ಣ ದಂತ ಚಿಕಿತ್ಸಾ ಕೇಂದ್ರ, ಸಮುದಾಯ ದಂತ ವಿಭಾಗ ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ , ದೇರಳಕಟ್ಟೆ – ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಉಚಿತ ದಂತ ಚಿಕಿತ್ಸಾ ಶಿಬಿರವು ಅ.16ರಂದು  ಕೃಷ್ಣ ಆಸ್ಪತ್ರೆ ಕಕ್ಕಿಂಜೆಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಡಾ ಬಾಲಕೃಷ್ಣ ಶೆಟ್ಟಿ ಅಸೋಸಿಯೇಟ್ ಪ್ರೊಫೆಸರ್ ಎಸ್.ಡಿ.ಎಮ್.ಸಿ.ಎನ್.ವೈ ಎಸ್ ಉಜಿರೆ ಇವರು ನೆರವೇರಿಸಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ದಂತ ಚಿಕಿತ್ಸಾ ಕೇಂದ್ರವನ್ನು ಪ್ರಾರಂಬಿಸಿದ್ದು ನಿಜಕ್ಕೂ ಪ್ರಶಂಸನೀಯ, ವೈದ್ಯಕೀಯ ಕ್ಷೇತ್ರದ ಸವಾಲುಗಳ ನಡುವೆ ಡಾ ಮುರಳಿಕೃಷ್ಣ ಇರ್ವತ್ರಾಯ ಇವರು ಮಾಡಿದಂತ ಸೇವೆಯು ಅಪಾರವಾದದ್ದು ಎಂದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಮುರಳಿಕೃಷ್ಣ ಇರ್ವತ್ರಾಯ ವಹಿಸಿದ್ದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪ್ರಕಾಶ್ ಶೆಟ್ಟಿ ನೊಚ್ಚ ಅಭಿವೃದ್ಧಿ ಅಧಿಕಾರಿಗಳು ಗ್ರಾ ಪಂ ಚಾರ್ಮಾಡಿ ಇವರು ಮಾತಾಡಿ ಇಂತಹ ಶಿಬಿರವು ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಜತೆಗೆ ಆರೋಗ್ಯಪೂರ್ಣ ಸಮಾಜವನ್ನಾಗಿಸಲು ಸಹಕಾರಿಯಾಗುತ್ತದೆ ಎಂದರು, ಮುಂದಿನ ದಿನಗಳಲ್ಲಿ ಗ್ರಾಮಪಂಚಾಯತ್ ವತಿಯಿಂದ ಸಂಪೂರ್ಣವಾಗಿ ಸಹಕರಿಸುವ ಬರವಸೆ ನೀಡಿದರು, ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ  ಪ್ರಸಾದ್ ಕೆ ವಿ ಅಧ್ಯಕ್ಷರು ಗ್ರಾ ಪಂ ಚಾರ್ಮಾಡಿ, ಸಿಸ್ಟರ್ ಮರಿಯಾ ರೆಜಿನಾ ಮುಖ್ಯೊಪದ್ಯಾಯರು ಸೈಂಟ್ ಸಾವಿಯೊ ಶಾಲೆ ಬೆಂದ್ರಾಳ, ಶ್ರೀ ಹೈದರ್ ಮರ್ದಳ ಪ್ರಾಂಶುಪಾಲರು ಮನ್ ಶರ್ ಪ್ಯಾರಮೆಡಿಕಲ್ ಕಾಲೇಜು ಗೇರುಕಟ್ಟೆ,ಡಾ.ಪ್ರಕೃತಿ ಶೆಟ್ಟಿ ದಂತ ವೈದ್ಯರು ಶ್ರೀ ಕೃಷ್ಣ ಆಸ್ಪತ್ರೆ,  ಗಿರೀಶ್ ಕುದ್ರೆಂತಾಯ ಉದ್ಯಮಿ ಗಳು ಧರ್ಮಸ್ಥಳ, ಉಪಸ್ಥಿತರಿದ್ದರು.

ಡಾ ಆಲ್ಬಿನ್ ಜೋಸೆಫ್ ಕಾರ್ಯಕ್ರಮ ನಿರೂಪಿಸಿದರು, ಡಾ ಪ್ರಕೃತಿ ಶೆಟ್ಟಿ ಸ್ವಾಗತಿಸಿ, ಶ್ರೀ ಕೃಷ್ಣ ಆಸ್ಪತ್ರೆಯ ಮುಖ್ಯ ವೈದ್ಯಾದಿಕಾರಿಗಳಾದ ಡಾ.ವಂದನಾ ಎಂ ಇರ್ವತ್ರಾಯ ಧನ್ಯವಾದವಿತ್ತರು,ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಜಿತ್ ಹರಿ ಪಿ ಆರ್ ಓ ಗಣೇಶ್,ಹೈದರ್ ಅಲಿ ಸಹಕರಿಸಿದರು.

ಸುಮಾರು ನೂರಕ್ಕೂ ಅಧಿಕ ಸಾರ್ವಜನಿಕರು ಭಾಗವಹಿಸಿ ಶಿಬಿರದ ಸಂಪೂರ್ಣ ಪ್ರಯೋಜನ ಪಡೆದುಕೊಂಡರು.

LEAVE A REPLY

Please enter your comment!
Please enter your name here