ಕೆಲವು ತಿಂಗಳ ಹಿಂದೆ ನಡೆದ ಅಪಘಾತದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳಾಲಿನ ಹರೀಶ್ ಮಡಿವಾಳ ನಿಧನ

0

ಬೆಳಾಲು ಗ್ರಾಮದ ಮಾಯಾ ನಂದಗೋಕುಲ ನಾರಾಯಣ ಮಡಿವಾಳರ ಪುತ್ರ ಹರೀಶ್ ಮಡಿವಾಳ (35 ವರ್ಷ ) ಅ.16 ರಂದು ನಿಧನರಾದರು.

ಕಳೆದ ಜನವರಿಯಲ್ಲಿ ಧರ್ಮಸ್ಥಳದಲ್ಲಿ ಬೈಕ್ ಮತ್ತು ಕಾರು ಅಪಘಾತದಲ್ಲಿ ಗಂಭೀರ ಗಾಯ ಗೊಂಡಿದ್ದ ಇವರು ಮಂಗಳೂರು ಮತ್ತು ಕೆಲವು ದಿನಗಳಿಂದ ಉಜಿರೆ ಎಸ್. ಡಿ. ಎಂ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೌಕರರಾಗಿದ್ದ ಇವರು ಪತ್ನಿ, ಇಬ್ಬರು ಸಣ್ಣ ಮಕ್ಕಳು, ತಂದೆ, ತಾಯಿ, ಸಹೋದರ, ಸಹೋದರಿಯಾರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here