ಕುತ್ಲೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿಬಂಧು ಒಕ್ಕೂಟ ಕುತ್ಲೂರು ಇದರ ಲೆಕ್ಕಪರಿಶೋಧನೆ ಕುತ್ಲೂರು ಸೇವಾಕೇಂದ್ರದಲ್ಲಿ ನಡೆಯಿತು. ಈ ವೇಳೆ ಲೆಕ್ಕ ಪರಿಶೋಧನೆಯಲ್ಲಿ S ಗ್ರೇಡ್ ಬಂದ ವರದಿಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರುಗಳಾದ ಕರಿಯ ಪೂಜಾರಿ ಮತ್ತು ಅಣ್ಣಿ ಎಂ.ಕೆ, ಒಕ್ಕೂಟದ ಪದಾಧಿಕಾರಿಗಳು, ಲೆಕ್ಕಪರಿಶೋಧಕಿ ಲಲಿತ ಹಾಗೂ ಸೇವಾ ಪ್ರತಿನಿಧಿ ಕೇಶವ ಪೂಜಾರಿ ಮತ್ತು ಸದಸ್ಯರು ಉಪಸ್ಥಿತರಿದ್ದರು.