ಪಣಕಜೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಗುರುವಾಯನಕೆರೆ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಪಣಕಜೆ ಇದರ ಸಂಯುಕ್ತ ಆಶ್ರಯದಲ್ಲಿ ಪಣಕ ಜೆಮೋಹನ್ ಪ್ರಭು ಇವರ ಮನೆಯಲ್ಲಿ ಮಿಶ್ರ ಕೃಷಿ ಬೇಸಾಯ ಹೈನುಗಾರಿಕೆ ಅಡಕೆ ಕೃಷಿ ಮಲ್ಲಿಗೆ ಕೃಷಿ, ಕಾಳುಮೆಣಸು ಅಣಬೆ ಕೃಷಿ ಬಗ್ಗೆ ರೈತ ಕ್ಷೇತ್ರ ಪಾಠಶಾಲೆ ಮಾಹಿತಿ ಕಾರ್ಯಾಗಾರ ನಡೆಯಿತು
ಅಧ್ಯಕ್ಷ ಮೋಹನ್ ಪ್ರಭು , ನಿರ್ದೇಶಕ ಜಿಲ್ಲಾ ಹಾಲು ಉತ್ಪಾದಕರ ಸಂಘ ದಕ್ಷಿಣ ಕನ್ನಡ , ಪದ್ಮನಾಭ ಶೆಟ್ಟಿ ,ಸುಧೀರ್ ಜೈನ್ ಧರ್ಮಸ್ಥಳ, ಯಂತ್ರಶ್ರೀ ಯೋಜನಾಧಿಕಾರಿಗಳು ಸತೀಶ್ ಆಚಾರ್ಯ ,ವಲಯ ಅಧ್ಯಕ್ಷರು, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಲಯ ಮೇಲ್ವಿಚಾರಕರು ವಸಂತ್ ನಿರೂಪಿಸಿದರು. ಪ್ರಸ್ತಾವಿಕ ಕೃಷಿ ಅಧಿಕಾರಿ ಭಾಸ್ಕರ್ ಮಾಡಿದರು .ವಂದನಾರ್ಪಣೆ ಸೇವಾ ಪ್ರತಿನಿಧಿ ಆನಂದ ಮತ್ತು ಪುಷ್ಪ ಮಾಡಿದರು.