ಬಳಂಜ: ಎನ್.ಎಸ್.ಎಸ್ ಶಿಬಿರ ಅನುಷ್ಠಾನ ಸಮಿತಿಯಿಂದ ಶಾಲೆಗೆ 30 ಸಾವಿರ ರೂ ಹಸ್ತಾಂತರ

0

ಬಳಂಜ:ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬಳಂಜದಲ್ಲಿ ನಾರಾವಿ ವಲಯ ಮಟ್ಟದ ಕ್ರೀಡಾಕೂಟವು ಅ.22 ರಂದು ನಡೆಯಿತು.

ಇತ್ತಿಚೆಗೆ ಬಳಂಜ ಶಾಲೆಯಲ್ಲಿ ವಾಣಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ರಾಷ್ಟ್ರೀಯ ಸೇವಾ ಯೋಜನೆಯು ನಡೆದಿದ್ದು, ಅದರಲ್ಲಿ ಉಳಿದ ಉಳಿಕೆ ಮೊತ್ತ ರೂ 30 ಸಾವಿರವನ್ನು ಶಾಲಾ ಕ್ರೀಡಾಕೂಟಕ್ಕೆ ನೀಡಲಾಯಿತು.

ಶಿಬಿರ ಅನುಷ್ಠಾನ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಕುರೆಲ್ಯರವರು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರತ್ನಾಕರ ಪೂಜಾರಿಯವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಹಿರಿಯರಾದ ಕೆ.ವಸಂತ ಸಾಲಿಯಾನ್, ಪ್ರಮೋ್ ಕುಮಾರ್ ಬಳಂಜ ಹೊಸಮನೆ,ಸಂತೋಷ್ ಕುಮಾರ್ ಕಾಪಿನಡ್ಕ, ಸಂತೋಷ್ ಪಿ ಕೋಟ್ಯಾನ್ ಬಳಂಜ, ಯಶೋಧರ ಶೆಟ್ಟಿ ಅಟ್ಲಾಜೆ, ವಿಲ್ಪ್ರೆಡ್ ಪಿಂಟೋ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here