ಕಳಿಯ : ಇತ್ತೀಚೆಗೆ ಸುರಿದ ಮಳೆ, ಸಿಡಿಲಿಗೆ ಕಳಿಯ ಗ್ರಾಮದ ಕುಂಠಿನಿ ಅಂಗನವಾಡಿ ಕೇಂದ್ರ ನವಾಡಿ ಕೇಂದ್ರಕ್ಕೆ ಸಿಡಿಲು ಬಡಿದು ಗೋಡೆಯಲ್ಲಿ ಬಿರುಕು ಬಿಟ್ಟಿರುವ ಘಟನೆ ನಡೆದಿದೆ.
ಅಂಗನವಾಡಿ ಕೇಂದ್ರದ ಸೋಲಾರ್ ಲೈಟ್ಸ್, ವಿದ್ಯುತ್ ಉಪಕರಣಗಳು ಸಿಡಿಲ ರಭಸಕ್ಕೆ ಗೋಡೆಯಿಂದ ಕಿತ್ತು ಹೋಗಿದೆ. ಸುಮಾರು 50 ಸಾವಿರಕ್ಕೂ ಹೆಚ್ಚಿನ ಪ್ರಮಾಣದಲ್ಲಿ ನಷ್ಟವಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.ರಾತ್ರಿ ನಡೆದಿರುವುದರಿಂದ ಮಕ್ಕಳು ಹಾಗೂ ಸಿಬ್ಬಂದಿಗಳು ಇಲ್ಲದೇ ಇದ್ದುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.