ಬೆಳಾಲು ಅನಂತೋಡಿ ಫ್ರೆಂಡ್ಸ್ ದೀಪಾವಳಿ ಹಬ್ಬದ ಕೆಸರು ಗದ್ದೆ ಕ್ರೀಡಾ ಕೂಟ ಉದ್ಘಾಟನೆ 

0

ಬೆಳಾಲು :ಶ್ರೀ ಅನಂತೇಶ್ವರ ಫ್ರೆಂಡ್ಸ್ ಬೆಳಾಲು ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ 12 ನೇ ವರ್ಷದ ಕೆಸರು ಗದ್ದೆ ಕ್ರೀಡಾ ಕೂಟ ಅ.30 ರಂದು ಅನಾತೋಡಿಯಲ್ಲಿ ನಡೆಯಿತು.

ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಆಶ್ರಣ್ಣ ಗಿರೀಶ್ ಬಾರಿತ್ತಾಯ ದೀಪ ಬೆಳಗಿಸಿ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನೋಟರಿ ವಕೀಲ ಎನ್. ಶ್ರೀನಿವಾಸ ಗೌಡ ವಹಿಸಿದ್ದರು.

ಅತಿಥಿಗಳಾಗಿ ಉದ್ಯಮಿ ಮೀನದೇಲು ಸ್ಟೋರ್ ನ ಜಯಣ್ಣ ಗೌಡ, ಉಜಿರೆ ಮೆಸ್ಕಾಂ ನ ಪವರ್‌ ಮ್ಯಾನ್ ಆನಂದ್, ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ಸಹಾಯಕ ವ್ಯವಸ್ಥಾಪಕ ಜಾರಪ್ಪ ಪೂಜಾರಿ ಬೆಳಾಲು, ಭಾಗವಹಿಸಿದ್ದರು.

ಅನಂತೇಶ್ವರ ಫ್ರೆಂಡ್ಸ್ಅಧ್ಯಕ್ಷ ಕಾಂತಪ್ಪ ಗೌಡ, ಗೌರವ ಅಧ್ಯಕ್ಷ ಯಶೋಧರ ಗೌಡ, ಕಾರ್ಯದರ್ಶಿ ಕಿರಣ್ ಸುವರ್ಣ, ಶ್ರೀ ಅನಂತೆಶ್ವರ ಭಜನಾ ಮಂಡಳಿ ಅಧ್ಯಕ್ಷ ಗುರುರಾಜ ಓಡಿಪ್ರೋಟ್ಟು, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅನಂತೇಶ್ವರ ಫ್ರೆಂಡ್ಸ್ ಸ್ಥಾಪಕ ಅಧ್ಯಕ್ಷ ಬೆಳಾಲು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸತೀಶ್ ಎಳ್ಳುಗದ್ದೆ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗಿರೀಶ್ ಮಂಜೊತ್ತು ನಿರೂಪಿಸಿ ಸದಾಶಿವ ಓಡಿಪ್ರೋಟ್ಟು ವಂದಿಸಿದರು. ಸಮಿತಿ ಪದಾಧಿಕಾರಿಗಳು, ಸದಸ್ಯರು, ಭಜನಾ ಮಂಡಳಿ ಸದಸ್ಯರು, ದೇವಸ್ಥಾನ ಸಮಿತಿ ಸದಸ್ಯರು, ಊರವರು, ಕ್ರೀಡಾ ಸ್ಪರ್ಧಿಗಳು ಹಾಜರಿದ್ದರು. ಕೆಸರು ಗದ್ದೆಗೆ ಪೂಜೆ ಹಾಗು ಉಳುಮೆ ಎತ್ತು ಗದ್ದೆಗೆ ಏಳಿಸುವ ಮೂಲಕ ಉದ್ಘಾಟನೆ ಮಾಡಲಾಯಿತು. ಅನಂತರ ವಿವಿಧ ಸ್ಪರ್ಧೆಗಳು ನಡೆಯಿತು

LEAVE A REPLY

Please enter your comment!
Please enter your name here