ಬೆಳ್ತಂಗಡಿ : ನ. 10 ರಿಂದ 11 ರ ವರೆಗೆ ಹೈದರಾಬಾದ್ ನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಜಾದೂ ಸಮ್ಮೇಳನದಲ್ಲಿ ಬೆಳ್ತಂಗಡಿ ಸ್ಫೂರ್ತಿಯಕ್ಷಣಿ ಲೋಕದ ವ್ಯವಸ್ಥಾಪಕ, ಜಾದೂಗಾರ ರಾಜೀವ್ ಬಿ. ಹೆಚ್.ರವರು ಬೆಳ್ತಂಗಡಿ ಯ ಪ್ರತಿನಿಧಿಯಾಗಿ ಭಾಗವಹಿಸಲಿದ್ದಾರೆ.
ಈ ಸಮ್ಮೇಳನದಲ್ಲಿ , ಜಾದೂ ಸ್ಪರ್ಧೆ, ಹಾಗೂ ತರಬೇತಿ ಮತ್ತು ಪ್ರದರ್ಶನ ನಡೆಯಲಿದೆ. ರಾಷ್ಟ್ರದ 500 ಕ್ಕೂ ಹೆಚ್ಚಿನ ಜಾದೂಗಾರರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದು ಬೆಳ್ತಂಗಡಿ ಯ ಪ್ರತಿನಿಧಿ ಯಾಗಿ ರಾಜೀವ್ ಬಿ.ಹೆಚ್. ರವರು ಇದು 2 ನೇ ಬಾರಿ ಭಾಗವಹಿಸುತಿದ್ದಾರೆ.