ಬೆಳ್ತಂಗಡಿ: ಪಂಚದುರ್ಗ ಫ್ರೆಂಡ್ಸ್ ,ಮಾವಿನಕಟ್ಟೆ ಕೊಯ್ಯೂರು ಆಶ್ರಯದಲ್ಲಿ, ಅಮೆಚೂರ್ ಕಬಡ್ಡಿ ಅಸೋಸಿಯೇಶನ್ (ರಿ.)ಬೆಳ್ತಂಗಡಿ ಸಹಕಾರದೊಂದಿಗೆ ದೀಪಾವಳಿ ಹಬ್ಬದ ಪ್ರಯುಕ್ತ ದಿ.ಪುರುಷೋತ್ತಮ ಗೌಡ ಸ್ಮರಣಾರ್ಥ, ಬೆಳ್ತಂಗಡಿ ತಾಲೂಕು ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ,ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷರಾದ ರಕ್ಷಿತ್ ಶಿವರಾಂ ಭಾಗವಹಿಸಿದರು.
ಈ ಸಂದರ್ಭದಲ್ಲಿ ಪಂಚದುರ್ಗ ಫ್ರೆಂಡ್ಸ್ ಅಧ್ಯಕ್ಷರಾದ ಪ್ರವೀಣ್ ಗೌಡ ಕೊಯ್ಯೂರು, ಅಶೋಕ್ ಭಟ್ ಅಗ್ರಸಾಲೆ, ನವೀನ್ ಗೌಡ ವಾದ್ಯಕೋಡಿ, ಕರೀಂ ಗೇರುಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
ಈ ವೇಳೆ ರಾಧಾಕೃಷ್ಣ ಟಿ, 2022 ಸಾಲಿನ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು ಸರ್ಕಾರಿ ಫ್ರೌಡ ಶಾಲೆ, ಕೊಯ್ಯೂರು ಮತ್ತು ರಾಮಚಂದ್ರ ದೊಡ್ಡಮನಿ, 2022 ಸಾಲಿನ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು ಸರ್ಕಾರಿ ಫ್ರೌಡ ಶಾಲೆ, ಕೊಯ್ಯೂರು ಇವರಿಗೆ ಸನ್ಮಾನಿಸಲಾಯಿತು.