ಪುತ್ತೂರು: ‘ವಿಶ್ವ ಆಹಾರ ಸುರಕ್ಷತಾ’ ದಿನದ ಅಂಗವಾಗಿ ಕಾಂಪ್ಕೊ ಚಾಕಲೇಟ್ ಫ್ಯಾಕ್ಟರಿಯಲ್ಲಿ ನಾಲ್ಕು ದಿನದ ತರಬೇತಿ ಕಾರ್ಯಕ್ರಮ ಜೂ.7ರಿಂದ ಆರಂಭಗೊಂಡಿದ್ದು, ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್ ಸತೀಶ್ಚಂದ್ರ ಉದ್ಘಾಟಿಸಿ ಕ್ಯಾಂಪ್ಕೋ ಜಾಗತಿಕ ಮಟ್ಟದಲ್ಲಿ ಗುರುತಿಸಲು ಅದರ ಗುಣಮಟ್ಟ ಮತ್ತು ಸ್ವಾದಿಷ್ಟತೆಯೇ ಕಾರಣ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ತರಬೇತಿ ಕಾರ್ಯಕ್ರಮವು ಆಹಾರ ಸುರಕ್ಷರತೆ, ವೈಯಕ್ತಿಕ ನೈರ್ಮಲ್ಯ, ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತೆ, ಆಹಾರ ಗುಣಮಟ್ಟ ಆಹಾರ ಶೇಖರಣೆ ಮುಂತಾದ ವಿಷಯಗಳಲ್ಲಿ ಕ್ಯಾಂಪ್ಕೋ ಹಿರಿಯ ಅಧಿಕಾರಿಗಳಿಂದ ತರಬೇತಿ ನೀಡಲಾಗುತ್ತದೆ.ಎಲ್ಲಾ ನೌಕರರು ವಿಶ್ವ ಆಹಾರ ಸುರಕ್ಷಾ ದಿನದ ಪ್ರಯುಕ್ತ ಆಹಾರ ಸುರಕ್ಷತೆಯ ಕುರಿತು ಪ್ರಮಾಣ ವಚನ ಸ್ವೀಕರಿಸಿದರು.
ಆರೋಗ್ಯಾಧಿಕಾರಿ ಡಾ. ಬದ್ರುದ್ದೀನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕರಾದ ಸುರೇಶ್ ಭಂಡಾರಿ ಎಂ., ಉಪ ಪ್ರದಾನ ವ್ಯವಸ್ಥಾಪಕ ರೇಶ್ಮ ಮಲ್ಯ, ಫ್ಯಾಕ್ಟರಿ ಡಿ.ಜಿ.ಯಂ. ಫ್ರಾನ್ಸಿಸ್ ಡಿ ಸೋಜ , ಸಹಾಯಕ ಪ್ರದಾನ ವ್ಯವಸ್ಥಾಪಕರಾದ ಶ್ಯಾಂ ಪ್ರಸಾದ್, ನೆಸ್ಲೆ ಘಟಕದ ಮುಖ್ಯಸ್ಥ ಪ್ರದೀಪ್ ವಲ್ಸ್’ಲಾ ಉಪಸ್ಥಿತರಿದ್ದರು.