ಬೆಳ್ತಂಗಡಿ : ವಿಶ್ವದಾದ್ಯಂತ ಆಚರಿಸಲ್ಪಡುವ ಧರ್ಮೋಪದೇಶಕರ ದಿನವನ್ನು ಸಂತ ಚಾರ್ಲ್ಸ್ ಬೋರೋಮಿಯೋ ಇವರ ಹಬ್ಬದ ದಿನವನ್ನು ವಿಶೇಷ ಭಯ ಭಕ್ತಿಯಿಂದ ಬೆಳ್ತಂಗಡಿ ಸಂತ ಲಾರೆನ್ಸ್ ಕಥೆಡ್ರಲ್ ಚರ್ಚಿನಲ್ಲಿ ಆಚರಿಸಲಾಯಿತು.
ಚರ್ಚಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಾದ ರೆಜಿ ಜಾರ್ಜ್ ಇವರ ನೇತೃತ್ವದಲ್ಲಿ ಎಲ್ಲಾ ಧರ್ಮೋಪದೇಶಕರನ್ನು ಚರ್ಚಿನ ಧರ್ಮ ಗುರುಗಳಾದ ವಂದನಿಯ ತೋಮಸ್ ಕಣ್ಣಾ ೦ಕಲ್ ಸ್ಮರಣಿಕೆ ನೀಡಿ ಅವರ ಸೇವೆಯನ್ನು ಕೊಂಡಾಡಿದರು.
ಧರ್ಮೋಪದೇಶಕರೇ ಧರ್ಮ ವನ್ನು ಅನುಸರಿಸುವ ಮಾದರಿ ವ್ಯಕ್ತಿ ಗಳಾಗಿ ಬದಲಾವಣೆ ಹೊಂದಿ ದಾಗ ಧರ್ಮೋಪದೇಶ ಹೆಚ್ಚು ಪರಿಣಾಮ ಕಾರಿ ಯಾಗುತ್ತದೆ ಎಂದು ತಿಳಿಸಿದರು. ಆಶಾ ಅರಕ್ಕಲ್ ಕಾರ್ಯಕ್ರಮ ನಿರೂಪಿಸಿದರು. ಶಾಲು ಹೂ ಗುಚ್ಚ ಸ್ಮರಣಿಕೆ ನೀಡಿ ಎಲ್ಲಾ ಶಿಕ್ಷಕರನ್ನು ಅಭಿನಂದಿಸಲಾಯಿತು.