ಮಚ್ಚಿನ: ದೃತಿ ಕ್ರಿಯೇಷನ್ಸ್ ಮತ್ತು ಸಕ್ಸಸ್ ಫಿಲಂಸ್ ನಿರ್ಮಾಪಕ ತ್ರಿವಿಕ್ರಮ್ ಸಪಲ್ಯ ಬೆಳ್ತಂಗಡಿ ಅರ್ಪಿಸುವ ತುಳುನಾಡು ದೈವದ ಬಹುಭಾಷಾ ಚಲನಚಿತ್ರ “ಕರಿ ಹೈದಕರಿ ಅಜ್ಜ” ಇದರ ಮೂಹೂರ್ತವು ಬಳ್ಳ ಮಂಜ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ನ.07ರಂದು ಜರುಗಿತು.
ಮುಹೂರ್ತ ಕ್ಲಾಪ್ ನ್ನು ಮತ್ತು ಕಾರ್ಯಕ್ರಮದ ಉದ್ಘಾಟನೆಯನ್ನು ತ್ರಿ ವಿಕ್ರಮ್ ರವರ ಮಾತೃಶ್ರೀ ಕಮಲ ಸಪಲ್ಯ ನೆರವೇರಿಸಿದರು . ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಫಿಲಂಸ್ ಗೆ ಕ್ಯಾಮರ ಚಾಲನೆಯನ್ನು ನೀಡಿ ಶುಭ ಹಾರೈಸಿದರು.
ಸುಧೀರ್ ಅತ್ತಾವರ ನಿರ್ದೇಶನ ನೀಡಲಿದ್ದಾರೆ. ಹಾಲಿವುಡ್ ನಟ ಕಬೀರ್ ಬೇಡಿ ಮತ್ತು ಖ್ಯಾತ ನಟಿ ಶ್ರುತಿ ಈ ಸಿನಿಮಾದಲ್ಲಿ ನಟಿಸಲಿದ್ದಾರೆ.ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಹರ್ಷಸಂಪಿಗೆತ್ತಾಯ, ಮಚ್ಚಿನ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ ಉಪಸ್ಥಿತರಿದ್ದರು.