- ಸಾವಿರಕ್ಕೂ ಮಿಕ್ಕಿ ಆಸನವುಳ್ಳ ಸಭಾಂಗಣ
- ವಿಸ್ತಾರವುಳ್ಳ ಪ್ರತ್ಯೇಕ ಭೋಜನ ಶಾಲೆ
- ಜೂ.12 ರಂದುಲೋಕಾರ್ಪಣೆ
ಪುತ್ತೂರು: 2003ರಲ್ಲಿ ಸದ್ವಿಚ್ಛೆ ಎಸೋಸಿಯೇಟ್ಸ್ರವರಿಂದ ದರ್ಬೆ-ಬೈಪಾಸ್ ಸರ್ಕಲ್ ಬಳಿ ಸ್ಥಾಪಿತವಾದ ಬೆಳ್ಳಾರೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನ ಇದೀಗ ಸಾರ್ವಜನಿಕರ ಅಪೇಕ್ಷೆ ಮೇರೆಗೆ ಸಂಪೂರ್ಣ ಹವಾನಿಯಂತ್ರಿತದೊಂದಿಗೆ ಜೂ.12 ರಂದು ಲೋಕಾರ್ಪಣೆಗೊಳ್ಳಲಿದೆ.
ಹಿರಿಯ ಕವಿ, ಸಾಹಿತಿ ಕಯ್ಯಾರ ಕಿಂಞಣ್ಣ ರೈಯವರಿಂದ ಉದ್ಘಾಟನೆಗೊಂಡ ಈ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನವು ಸಾವಿರಕ್ಕೂ ಮಿಕ್ಕಿ ಆಸನಗಳನ್ನು ಒಳಗೊಂಡಿದೆ ಮಾತ್ರವಲ್ಲದೆ ಪ್ರತ್ಯೇಕ ವಿಸ್ತಾರವುಳ್ಳ ಭೋಜನ ಶಾಲೆಯು ಸಾರ್ವಜನಿಕರ ಗಮನ ಸೆಳೆದಿತ್ತು. ಪುತ್ತೂರು ಪೇಟೆಯಿಂದ ಅನತಿ ದೂರದಲ್ಲಿರುವ ಈ ಸಭಾಂಗಣ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನೂ ಕೂಡ ಒಳಗೊಂಡಿದೆ. ಇದೀಗ ಸಾರ್ವಜನಿಕರ ಬಹು ಅಪೇಕ್ಷೆ ಮೇರೆಗೆ ಸಭಾಂಗಣವನ್ನು ಸಂಪೂರ್ಣ ಹವಾನಿಯಂತ್ರಿತಗೊಳಿಸಿ ಮೇಲ್ದರ್ಜೆಗೊಳಿಸಲಾಗಿದ್ದು ಬುಕ್ಕಿಂಗ್ ಆರಂಭಗೊಂಡಿದೆ ಎಂದು ಸಭಾಭವನದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.