ಗುಂಡೂರಿಗೂ ವ್ಯಾಪಿಸಿದ ಎಲೆಚುಕ್ಕಿ ರೋಗ, ಆತಂಕದಲ್ಲಿ ಕೃಷಿಕರು, ದ್ರಾವಣ ಸಿಂಪಡಿಸಲು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಲಹೆ

0

ವೇಣೂರು: ತಾಲೂಕಿನ ಎಳನೀರು, ಮಲವಂತಿಗೆಯಲ್ಲಿ ಕಾಣಿಸಿಕೊಂಡಿದ್ದ ಅಡಿಕೆ ಎಲೆಚುಕ್ಕಿ ರೋಗ ಇದೀಗ ಗುಂಡೂರಿ ಗ್ರಾಮದ ತೋಟದಲ್ಲೂ ಕಾಣಿಸಿಕೊಂಡಿದೆ.

ಹವಾಮಾನ ವೈಪರೀತ್ಯದಿಂದ ಕೊಲೆಟ್ರೋಟ್ರಿಕಮ್ ಗ್ಲೋಯೋಸ್ಟೋರಿಯೆಯಿಡ್ಸ್ ಎಂಬ ಶಿಲೀಂಧ್ರದಿಂದ ಉಂಟಾದ ಈ ರೋಗ ವಾರಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಎಳನೀರು, ಮಲವಂತಿಗೆ ತೋಟಗಳಲ್ಲಿ ಕಾಣಿಸಿಕೊಂಡಿತ್ತು.

ಇದೀಗ ಗುಂಡೂರಿ ಗ್ರಾಮದ ಕಲ್ಕಡ, ಮಲೆಬೆಟ್ಟು ಪರಿಸರದ ತೋಟಗಳಲ್ಲಿ ಈ ರೋಗ ಕಾಣಿಸಿಕೊಂಡಿದ್ದು, 1000ಕ್ಕೂ ಮಿಕ್ಕಿ ಅಡಿಕೆ ಮರ ರೋಗಕ್ಕೆ ತುತ್ತಾಗಿದ್ದು, ರೈತರು ಆತಂಕ ಸೃಷ್ಟಸಿದೆ.

ಈ ಬಗ್ಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿರುವ ರೈತರಿಗೆ ಹೆಕ್ಸ್‌ಕೋನೊಜಲ್ ಅಥವಾ ಪ್ರೊಪಿಕೊಜಲ್ ದ್ರಾವಣವನ್ನು ಒಂದು ಲೀ. ನೀರಿಗೆ 1 ಎಂ.ಎಲ್.ನಷ್ಟು ಬೆರೆಸಿ ರೋಗಬಾದಿತ ಮರಗಳಿಗೆ ಸಿಂಪಡಿಸುವಂತೆ ಸಲಹೆ ನೀಡಿದ್ದಾರೆ.

LEAVE A REPLY

Please enter your comment!
Please enter your name here