ಉರುವಾಲು ಪದವಿನಲ್ಲಿ ಮದರಸ ವಿಧ್ಯಾರ್ಥಿಗಳ ಪ್ರತಿಭಾ ಸಂಗಮ

0


ಉರುವಾಲು:  ಇಲ್ಲಿಯ ಹಯಾತುಲ್ ಇಸ್ಲಾಮ್ ಮದರಸದಲ್ಲಿ ಸುನ್ನೀ ಜಂಯೀಯತುಲ್ ಮುಅಲ್ಲಿಮೀನ್ (ಎಸ್ ಜೆ ಎಂ)ಕುಪ್ಪೆಟ್ಟಿ ರೇಂಜ್ ವತಿಯಿಂದ ನ 13 ರಂದು ರೇಂಜ್ ಅಧ್ಯಕ್ಷರಾದ ಉಮರುಲ್ ಫಾರೂಖ್ ಸಖಾಫಿ ಯವರ ಅಧ್ಯಕ್ಷತೆಯಲ್ಲಿ ಪ್ರತಿಭಾ ಸಂಗಮ ಜರುಗಿತು.

ಉರುವಾಲು ಜಮಾಅತ್ ಅಧ್ಯಕ್ಷರಾದ ಅಬ್ದುಲ್ ಹಮೀದ್ ರವರು ಧ್ವಜಾರೋಹಣ ನೆರವೇರಿಸಿದರು. ಕೋಶಾಧಿಕಾರಿ ಇಸ್ಮಾಯಿಲ್ ಸ ಅದಿ ಉಸ್ತಾದರು ದುಆ ನೆರವೇರಿಸಿದರು.

ಉರುವಾಲು ಮಸೀದಿಯ ಖತೀಬ್ ಸುಲೈಮಾನ್ ಸ ಅದಿ ಉಸ್ತಾದರು ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅಳಕೆ ಮಸೀದಿಯ ಖತೀಬರಾದ ಅಬ್ದುಸ್ಸಲಾಂ ಅಮ್ಜದಿ, ಮುಖ್ಯ ಅಥಿತಿಗಳಲ್ಲಿ ಉರುವಾಲು ಮಸೀದಿ ಕಾರ್ಯದರ್ಶಿ ಅಬ್ಬಾಸ್ ಎಸ್ ಎ,   ಅಂಡೆಕೇರಿ ಮಸೀದಿ ಅಧ್ಯಕ್ಷರಾದ ಶಫೀಖ್ ಅಹ್ಸನಿ, ಬಟ್ಲಡ್ಕ ಮಸೀದಿಯ ಖತೀಬರಾದ ಮುಹಮ್ಮದ್ ಆಶಿಫ್ ಸಖಾಫಿ,  ಪದ್ಮುಂಜ ಮಸೀದಿಯ ಖತೀಬರಾದ ಮುಹಮ್ಮದ್ ಹನೀಫ್ ಬಾ ಅಹ್ಸನಿ, ಎಸ್ ವೈ ಎಸ್ ಕುಪ್ಪೆಟ್ಟಿ ಸೆಂಟರ್ ಅಧ್ಯಕ್ಷರಾದ ಹೈದರ್ ಫೈಝಿ,  ಎಸ್ ಎಸ್ ಎಫ್ ಕುಪ್ಪೆಟ್ಟಿ ಸೆಕ್ಟರ್ ಅಧ್ಯಕ್ಷರಾದ ಅತಾವುಲ್ಲಾ ಹಿಮಮಿ, ಯೂಸುಫ್ ಮುಸ್ಲಿಯಾರ್ ಕುದ್ರೆಡ್ಕ, ಎಸ್ ಎಂ ಎ ರಾಜ್ಯ ಸಮಿತಿ ಸದಸ್ಯ ಅಬ್ಬಾಸ್ ಬಟ್ಲಡ್ಕ, ಕುಪ್ಪೆಟ್ಟಿ ಎಸ್ ಎಂ ಎ ಅಧ್ಯಕ್ಷ ಉಸ್ಮಾನ್ ಹಾಜಿ, ಬೋವು ಮಸೀದಿಯ ಅಧ್ಯಕ್ಷ ಅಬ್ದುಲ್ ಹಮೀದ್ ಮುಸ್ಲಿಯಾರ್, ಅಳಕೆ ಮಸೀದಿ ಅಧ್ಯಕ್ಷರಾದ ಅಬೂಬಕ್ಕರ್, ಕುದ್ರೆಡ್ಕ ಖತೀಬರಾದ ಹಂಝ ಮದನಿ, ಬೋವು ಖತೀಬರಾದ ಹುಸೈನ್ ಸಖಾಫಿ ಬೋವು ,ಎಸ್ ವೈ ಎಸ್ ರಾಜ್ಯ ಕಾರ್ಯದರ್ಶಿ ಕಾಸಿಂ ಪದ್ಮುಂಜ, ಎಸ್ ವೈ ಎಸ್ ಉರುವಾಲು ಬ್ರಾಂಚಿ ಅಧ್ಯಕ್ಷರಾದ ಕಾಸಿಂ ಪೀರ್ಯ, ಎಸ್ ಜೆ ಎಂ ಪ್ರ ಕಾರ್ಯದರ್ಶಿ ಇಬ್ರಾಹಿಮ್ ಸ ಅದಿ ಕನ್ಯಾರಕೋಡಿ ಸ್ವಾಗತಿಸಿದರು. ಅಬ್ದುಲ್ ರಹೀಮ್ ಸಖಾಫಿ ಉರುವಾಲು ಹಾಗೂ ಶರೀಫ್ ಸಖಾಫಿ ನೆಕ್ಕಿಲು ಕಾರ್ಯಕ್ರಮ ನಿರೂಪಿಸಿದರು. ಎಸ್ ಜೆ ಎಂ ಕಾರ್ಯದರ್ಶಿ ಇಬ್ರಾಹಿಮ್ ಸ ಅದಿ ಯವರು ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here