ಎರುಕಡಪ್ಪು: ವೈ ಬಿ ರೆಸಿಡೆನ್ಸಿ ಗೃಹ ಕಟ್ಟಡ ಉದ್ಘಾಟನೆ

0

ಕೊಯ್ಯೂರು: ಇಲ್ಲಿಯ ಎರುಕಡಪ್ಪುನಲ್ಲಿ  ವೈ ಬಿ ರೆಸಿಡೆನ್ಸಿ ಗೃಹ ಕಟ್ಟಡ  ನ.18ರಂದು ಉದ್ಘಾಟನೆಗೊಂಡಿತು.

ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಯುತ ಅಶೋಕ್ ಭಟ್  ಜಾತಿ ಮತ ಬೇಧ ಮರೆತು, ಶಾಂತಿ ಸೌಹಾರ್ಧತೆಯ ಸಂದೇಶ ಮೂಲಕ ಶುಭಹಾರೈಸಿದರು.

ಸೆಲೂನು ಹಾಗೂ ಚಿಕನ್ ಸೆಂಟರ್ ಉದ್ಘಾಟನೆಯನ್ನು ಕೊಯ್ಯೂರು  ಗ್ರಾಮ ಪಂಚಾಯತ್ ಅಧ್ಯಕ್ಷರು  ಜಗನಾಥ್  ಮತ್ತು ಕೊಯ್ಯೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಡಾ ಪ್ರಕಾಶ್ ನೆರೆವೇರಿಸಿದರು.

ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ  ಕೊಯ್ಯೂರು ಗ್ರಾ ಪಂ  ಸದಸ್ಯರುಗಳಾದ  ಲೋಕೇಶ್ ಪಾಂಬೇಲು, ಲತೀಫ್ ಉನ್ನಾಲು, ಶ್ರೀಮತಿ ಹೇಮಾವತಿ , ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಅನಂತ ಕೃಷ್ಣ ಭಟ್ , ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷರು ನವೀನ್ ಕುಮಾರ್ ವಾದ್ಯಕೋಡಿ,  ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮಾಜಿ ಅದ್ಯಕ್ಷರು ಉಜ್ವಲ ಗೌಡ ಪಾಂಬೇಲು, ಮಾದವ ಗೌಡ ಬೆಲ್ಡೆ , ಬದ್ರುದ್ದೀನ್ ಬೆಲ್ಡೆ , ಮಹಮ್ಮದ್ ರಫೀಕ್ ಬೆಲ್ಡೆ, ವೀರಪ್ಪ ನಲಿಕೆ, ಇಸಾಕ್ ದರ್ಖಾಸ್, ಯಾಕೂಬು ದರ್ಖಾಸ್, ಪುತ್ತುಮೋನು ಪಾತ್ರಳ, ಶ್ರೀ ಮತಿ ಹೇಮಾಲತಾ ಮೋಹನ್ ಗೌಡ ಉಪಸ್ತಿತರಿದ್ದರು ಹಾಗೂ ಯೂಸುಫ್ ಕೊಯ್ಯೂರು ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

ಅಬ್ದುಲ್ ಹಮೀದ್, ಅಬ್ದುಲ್ ರಝಾಕ್  ವೈ ಬಿ ರೆಸಿಡೆನ್ಸಿಯ ಮಾಲಕ, ಅಧ್ಯಕ್ಷರು ಎಂ ಜೆ ಎಂ ಎರುಕಡಪ್ಪು ಮಹಮ್ಮದ್ ಹಾರುನು ಬಜಿಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here