ಬೆಳ್ತಂಗಡಿ ಒಕ್ಕಲಿಗ ಗೌಡರ ಸಂಘದಿಂದ ಎರಡ ಲಕ್ಷ ರೂ. ಹಸ್ತಾಂತರ

0

ಬೆಳ್ತಂಗಡಿ : ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ನ.19 ರಂದು ಪ್ರತಿಷ್ಠಾಪನೆಗೊಳ್ಳಲಿರುವ ಸ್ವಾತಂತ್ರ ಹೋರಾಟಗಾರ ಒಕ್ಕಲಿಗ ಗೌಡರ ಧೀಮಂತ ಪ್ರತಿನಿಧಿ ಶ್ರೀ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದ ಪ್ರಯುಕ್ತ  ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದ ವತಿಯಿಂದ ನ.18ರಂದು 2 ಲಕ್ಷ ರೂ. ಚೆಕ್ಕನ್ನು ಹಸ್ತಾಂತರಿಸಲಾಯಿತು.

ಕಾರ್ಯಕ್ರಮದ ಉಸ್ತುವಾರಿ ಸಮಿತಿಯ ಅಧ್ಯಕ್ಷರಾದ ಎಂ. ಬಿ.ಕಿರಣ್ ಬೋಡ್ಲೆಗುತ್ತು ಅವರಿಗೆ ಸಂಘದ ಅಧ್ಯಕ್ಷರಾದ ಕೇರಿಮಾರು ಬಾಲಕೃಷ್ಣ ಗೌಡ ಹಾಗೂ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿಯ ಮುಖ್ಯಕಾರ್ಯನಿರ್ವಾಹಣಾಧಿಕಾರಿಯಾದ ದಿನೇಶ್ ಕುಮಾರ್ ಕಲ್ಲಾಜೆ ಹಸ್ತಾಂತರ ಮಾಡಿದರು.

LEAVE A REPLY

Please enter your comment!
Please enter your name here